ಐನಾಪುರ :ಎನ್ ಎಸ್ ಎಸ್ ಎನ್ನುವುದು ಬದುಕುವ ಕಲೆಯನ್ನು, ಹೊಂದಿಕೊಂಡು ಬಾಳುವುದನ್ನು ಕಲಿಸುತ್ತದೆ’
ಎಂದು ಐನಾಪುರ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ ಕೊರ್ಬು ಹೇಳಿದರು.
ಅವರು ದಿ. 1ರಂದು ತಾಲ್ಲೂಕಿನ ಐನಾಪೂರ ಪಟ್ಟಣದ ಗುರುದೇವ ಆಶ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಐನಾಪುರ ಎನ್ ಎಸ್ ಎಸ್ ಘಟಕದ ಅಡಿಯಲ್ಲಿ 2025 26 ನೇ ಸಾಲಿನ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವನ್ನು .ಸಸಿಗೆ ನೀರೆಯುವದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಬುದ್ಧಿಮತ್ತೆ ಚಾಲ್ತಿಯಲ್ಲಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಲ್ಲಿ ಮನುಷ್ಯ ಸಂವೇದನೆಗಳನ್ನು ಬೆಳೆಸಲು ಇಂತಹ ಎನ್.ಎಸ್.ಎಸ್.ಶಿಬಿರಗಳು. ವಿದ್ಯಾರ್ಥಿಗಳ ಮುಂದಿನ ಭವಿಷ್ಯದಲ್ಲಿ ಬದುಕಿಗೆ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಈ ಶಿಬಿರ ದಾರಿದೀಪವಾಗಲಿ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಎನ್ ಕೆ ಮಾಂಗ ಮಾತನಾಡಿ ಮುಂದಿನ ಏಳು ದಿನಗಳವರೆಗೆ ನಡೆಯುವ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಶಿಸ್ತು ಪಾಲಿಸಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡುತ್ತಾ ಪದವಿ ಶಿಕ್ಷಣ ಎಂದರೆ ಪಠ್ಯ ಪುಸ್ತಕ ದ ಜ್ಞಾನಕಷ್ಟೇ ಸಿಮೀತವಲ್ಲ ಅದೊಂದು ಕನಸನ್ನು ನನಸಾಗಿಸುವ ವೇದಿಕೆ ಎಂದರು.
ಶಿಬಿರ ಕಾರ್ಯಕ್ರಮ ಅಧಿಕಾರಿ ಪ್ರೊಕಪಿಲ್ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದ್ದರು. ಇ ಸಂದಭದಲ್ಲಿ ಕಾಲೇಜು ಅಭಿವೃದಿ ಸಮೀತಿ ಸದಸ್ಯ ಪ್ರಕಾಶ ಕೋರ್ಬು,ಶಂಕರ ನಡೋಣಿ , ಶ್ರೀಶೈಲ ಅಪರಾಜ,ವೇದಿಕೆಯ ಮೇಲಿದರು. ಎಲ್ಲ ಭೋಧಕರು, ಸಿಬ್ಬಂದಿಗಳು ವಿದ್ಯಾರ್ಥಿ, ವಿದ್ಯಾರ್ಥಿ ನಿಯರು ಇದ್ದರು.ಕು ಸ್ನೇಹಾ ಗಾಣಿಗೇರ ಸ್ವಾಗತಿಸಿ ನಿರೂಪಿಸಿದರು. ಕು .ರಕ್ಷಿತಾ ದೇಸಾಯಿ ವಂದಿಸಿದರು.
ವರದಿ:ಮುರಗೇಶ ಗಸ್ತಿ




