ಮಲ್ಲಮ್ಮನ ಬೆಳವಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬೈಲಹೊಂಗಲ ಯೋಜನಕಚೇರಿ ವ್ಯಾಪ್ತಿಯ ಉಡಿಕೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನವಜೀವನ ಸಮಿತಿ ಸದಸ್ಯರ ಮತ್ತು ಪೋಷಕರ ಸಭೆ ನಡೆಸಲಾಯಿತು.ಸಭೆಯಲ್ಲಿ ಕಾರ್ಯ ಕ್ರಮ ಅಧ್ಯಕ್ಷರಾಗಿ ಜಿಲ್ಲಾ ಜನಜಾಗೃತಿ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾಗಿ ವಿಠ್ಠಲ ಪೀಸೇ ,ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯ್ಕ್ ,ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಸರ್,ತಾಲೂಕು ಯೋಜನಾಧಿಕಾರಿ ವಿಜಯಕುಮಾರ್ ಸರ್,ಪ್ರಾಥಮಿಕ ಆರೋಗ್ಯ ಇಲಾಖೆ ಆರೋಗ್ಯ ಸಹಾಯಕಿರಾದ ಎನ್ ಎನ್ ಮೊಕಾಶಿಯವರು ಮತ್ತು ದುರ್ಗಾದೇವಿ ಮತ್ತು ಶ್ರೀ ರಾಮಲಿಂಗೇಶ್ವರ ಎರೆಡು ನವಜೀವನ ಸಮಿತಿಯ ಅಧ್ಯಕ್ಷರು , ಸದಸ್ಯರು, ಪೋಷಕರು,ಊರಿನ ಗಣ್ಯರು, ದೇವಸ್ಥಾನ ಸಮಿತಿಯ ಸದಸ್ಯರು, ಸಂಘಗಳ ಸದಸ್ಯರು, ಸೇವಾಪ್ರತಿನಿಧಿಗಳಾದ ಮಂಜುನಾಥ್ ಕೊಠಗಿ, ಶೋಭಾ ಚೀಪ್ಲಕಟ್ಟೆ,ಮಂಗಳ ಹುಂಬಿ,ಪ್ರೇಮ ಗದೀಗಿಮಠ ಭಾಗವಸಿದ್ದರು. ವಲಯ ಮೇಲ್ವಿಚಾರಕರಾದ ಸಂತೋಷ ನಿರೂಪಣೆ,ಸ್ವಾಗತ , ಧನ್ಯವಾದಗಳು ಮಾಡಿದರು.ಕಾರ್ಯ ಕ್ರಮ ಯಶಸ್ವಿಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸಲಾಯಿತು .
ವರದಿ: ದುಂಡಪ್ಪ ಹೂಲಿ




