Ad imageAd image

ಬಸಾಪುರ ಶೀಗಿಹಳ್ಳಿ ಕೆಎ ಗ್ರಾಮದಲ್ಲಿ ಹಿಂದೂ- ಮುಸ್ಲಿಂ ಉರುಸು

Bharath Vaibhav
ಬಸಾಪುರ ಶೀಗಿಹಳ್ಳಿ ಕೆಎ ಗ್ರಾಮದಲ್ಲಿ ಹಿಂದೂ- ಮುಸ್ಲಿಂ ಉರುಸು
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ನಾಡು .ಕಿತ್ತೂರು ತಾಲೂಕಿನ ಅವಳಿ ಗ್ರಾಮಗಳಾದ ಬಸಾಪುರ ಶೀಗಿಹಳ್ಳಿ ಕೆ.ಏ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಿಂದೂ ಮುಸ್ಲಿಂ ಉರುಸು ಅತಿ ವಿಜೃಂಭಣೆಯಿಂದ ಜರುಗುವುದು.

ಏಕತಾ ಸಮಿತಿ ವತಿಯಿಂದ ಹಿಂದೂ ಮುಸ್ಲಿಂ ಉರುಸು ಬಾಘಸವಾರ ಶ್ರೀ ರಾಜಾಭಕ್ಷರವರ ಗಂಧ ಉರುಸು ರಂದು ಸಾಯಂಕಾಲ ಶ್ರೀ ಗೌಡರ ಮನೆಯಿಂದ ಗಂಧ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಹೊರಟು ರಾತ್ರಿ ಸಂದಲ ಮತ್ತು ಗಲೀಫವನ್ನು ರಾಜಾಭಕ್ಷರಿಗೆ ಏರಿಸಲಾಗುವುದು ಬೆಳಗ್ಗೆ ಎತ್ತುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ಊರಿನ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ರಾಜಾಭಕ್ಷರವರ ದೇವಸ್ಥಾನಕ್ಕೆ ತಲುಪುವುದು ತದನಂತರ ಊರಿನ ಗುರು ಹಿರಿಯರೆಲ್ಲರು ಸೇರಿ ಧ್ವಜಾರೋಹನ ನೆರವೇರಿಸುವರು ಹಾಗೂ ಇತರೆ ಕಾರ್ಯಕ್ರಮಗಳು ಜರುಗುದವು
ರಾಜಾಭಕ್ಷ ದೇವಸ್ಥಾನಕ್ಕೆ ವಿವಿಧ ಬಗೆಯ ದೀಪಾಲಂಕಾರ ಮಾಡಲಾಗಿದ್ದು ನೋಡುಗರ ಗಮನ ಸೆಳೆಯುವಂತಿದೆ

ಊರಿನ ತುಂಬೇಲಾ ಹಬ್ಬದ ವಾತಾವರಣ ಪ್ರತಿ ಮನೆಗಳ ಮುಂದೆ ಬಣ್ಣ -ಬಣ್ಣದ ರಂಗೋಲಿ ಮತ್ತು ಮನೆಗಳಿಗೆ ಮಾವಿನ ತೋರಣಗಳಿಂದ ಅಲಂಕರಿಸಲಾಗುವುದು ಶ್ರೀ ರಾಜಾಭಕ್ಷ ದೇವರಿಗೆ ಬೇಡಿಕೊಂಡ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದಿಡ ನಮಸ್ಕಾರ ಹಾಕುವರು ಸಾಯಂಕಾಲ ಊರಿನ ಯುವಕರು ದೇವರಿಗೆ ಬೃಹತ್ ಮಾಲೆಗಳನ್ನು ಟ್ರ್ಯಾಕ್ಟರ್ ಗಳಲ್ಲಿ ಸೌಂಡ್ ಸಿಸ್ಟಮ್ ಹಚ್ಚಿಕೊಂಡು ಸಕಲ ವಾದ್ಯ- ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀ ರಾಜಾಭಕ್ಷರವರಿಗೆ ಮಾಲೆಯನ್ನು ಅರ್ಪಿಸಲಾಗುವುದು.

ವರದಿ : ಬಸವರಾಜ ಭೀಮರಾಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!