ಹುಬ್ಬಳ್ಳಿ: ನಗರ ತಾಲೂಕು 11 ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಹುಬ್ಬಳ್ಳಿಯ ಲಿಂಗರಾಜ್ ನಗರದ ಸಮುದಾಯ ಭವನದಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಸಮುದಾಯ ಭವನದ ಮುಂಭಾಗದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಉಮೇಶ್ ಕೌಜಗೇರಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಡಾ. ಲಿಂಗರಾಜ್ ಅಂಗಡಿ ನೆರವೇರಿಸಿದರು. ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ವಿದ್ಯಾ ವಂಟಮುರಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿ ಜಿ ಪಾಟೀಲ್, ಸದಾಶಿವ ಚೌಶೆಟ್ಟಿ, ಈರಣ್ಣ ಎಮ್ಮಿ, ಈರಣ್ಣ ಕಾಡಪ್ಪನವರ, ನಿರ್ಮಲ ಜಳಕಿ, ಡಾ. ಎಂ ಆರ್ ಪಾಟೀಲ್, ಡಾ.ಎಚ್ ವಿ ಬೆಳಗಲಿ, ಆರ್ ಎಂ ಗೋಗೇರಿ, ಕಟ್ಟಿ ಮಂಗಳಮ್ಮದೇವಿ ಮಹಿಳಾ ಮಂಡಳದ ಸದಸ್ಯರು, ಲಿಂಗರಾಜ್ ನಗರದ ಮಹಿಳಾ ಮಂಡಳದ ಸದಸ್ಯರು, ಪ್ರೊಬಸ್ ಕ್ಲಬ್ ನ ಸದಸ್ಯರು, ಲಿಂಗರಾಜ ನಗರದ ನಿವಾಸಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಿಸಿದರು.
ಸುದೀರ್ ಕುಲಕರ್ಣಿ




