ನವದೆಹಲಿ: ಕೇರಳದ ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಪ್ರಕಟಿಸಿದ್ದು, ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರ ಕೆ. ಮುರಳೀಧರನ್ ಅವರು ವಟ್ಟಿಯೂರ್ಕಾವು ಕ್ಷೇತ್ರದಿಂದ ಸ್ರ್ಧಿಸುತ್ತಿದ್ದಾರೆ.
೧೪೦ ಸದಸ್ಯ ಬಲದ ಕೇರಳದ ವಿಧಾನ ಸಭೆ ಚುನಾವಣೆ ಮತದಾನ ಒಂದೇ ಹಂತದಲ್ಲಿ ಏಪ್ರಿಲ್ ೯ ರಂದು ನಡೆಯಲಿದೆ. ಮೇ. ೪ ರಂದು ಮತ ಏಣಿಕೆ ನಡೆಯಲಿದೆ. ಪ್ರಸಕ್ತ ವಿಧಾನ ಸಭೆ ಅವಧಿ ಮೇ. ೨೩ ರಂದು ಕೊನೆಗೊಳ್ಳಲಿದೆ.




