ಬೆಳಗಾವಿ: ನಗರದ ಹೃದಯಭಾಗದಲ್ಲಿ ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಾರನೊಬ್ಬನನ್ನು ಸಮಯಪ್ರಜ್ಞೆ ಮೆರೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಬೆಳಗಾವಿ ಜಿಲ್ಲಾ ಗೃಹರಕ್ಷಕ ದಳದ ಬೋಧಕರು ಮಾದರಿಯಾಗಿದ್ದಾರೆ.
ದಿ.20-03-2026 ರಂದು ಬೆಳಿಗ್ಗೆ ಸುಮಾರು 11:30 ಗಂಟೆಗೆ ಬೆಳಗಾವಿ ನಗರದ RTO ಸರ್ಕಲ್ ಹತ್ತಿರ ಕಾರು ಮತ್ತು ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು, ಜೀವನ್ಮರಣದ ನಡುವೆ ಹೋರಾಡುತ್ತಿದ್ದರು.
ಸಮಯಕ್ಕೆ ಒದಗಿದ ಸಂಜೀವಿನಿ:
ಅದೇ ಮಾರ್ಗವಾಗಿ ಇಲಾಖೆಯ ಕೆಲಸದ ನಿಮಿತ್ತ ತೆರಳುತ್ತಿದ್ದ ಬೆಳಗಾವಿ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯ ಬೋಧಕರಾದ ಶ್ರೀ ರವೀಂದ್ರ ಮಾಳಗಿ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಆಂಬ್ಯುಲೆನ್ಸ್ಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡದೇ, ಗಾಯಾಳುವನ್ನು ತಕ್ಷಣವೇ ಇಲಾಖೆಯ ವಾಹನದಲ್ಲಿಯೇ ಹಾಕಿಕೊಂಡು BIMS ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
”ಅಪಘಾತದ ಸಮಯದಲ್ಲಿ ಪ್ರತಿ ಸೆಕೆಂಡು ಕೂಡ ಅಮೂಲ್ಯ. ಗಾಯಾಳುವನ್ನು ನೋಡಿ ಸುಮ್ಮನೆ ಹೋಗುವ ಬದಲು, ಅವರಿಗೆ ಚಿಕಿತ್ಸೆ ಕೊಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು.”
ರವೀಂದ್ರ ಮಾಳಗಿ, ಬೋಧಕರು
ಸಾರ್ವಜನಿಕರ ಮೆಚ್ಚುಗೆ:
ಸಕಾಲದಲ್ಲಿ ಸ್ಪಂದಿಸಿ ಮಾನವೀಯತೆ ಮೆರೆದ ಶ್ರೀ ರವೀಂದ್ರ ಮಾಳಗಿ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಇಲಾಖೆಯಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಜನ ಸಾಮಾನ್ಯರು ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ.
ವರದಿ :ಮಹಾಂತೇಶ್ ಎಸ್ ಹುಲಿಕಟ್ಟಿ




