ನವದೆಹಲಿ: ಬಿಸಿಸಿಐನಿಂದ ನೇಮಕವಾಗಿ ವೀಕ್ಷಕ ವಿವರಣೆಕಾರರಾಗಿ ಸೇವೆ ಸಲ್ಲಿಸುತ್ತಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಪಂದ್ಯಕ್ಕೂ ಮುನ್ನ ಹಾಗೂ ಪಂದ್ಯಾನAತರ ನಿರೂಪಣೆ ಕಾಮೆಂಟರಿ ಮಾಡಲು ತಮಗೆ ಅವಕಾಶ ನೀಡುತ್ತಿಲ್ಲ. ಬಿಸಿಸಿಐನಿಂದ ಪ್ರಸಾರ ಹಕ್ಕು ಪಡೆದ ಕಂಪನಿಯೊAದು ಹೀಗೆ ಮಾಡುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿರುವ ಎಲ್. ಶಿವರಾಮಕೃಷ್ಣನ್ ಅವರು ಕಾಮೆಂಟರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಾನು ಕಪ್ಪಗೆ ಇದ್ದೇನೆ ಎಂಬ ಕಾರಣಕ್ಕೆ ನನಗೆ ಅವಕಾಶ ದೊರೆಯುತ್ತಿಲ್ಲ ಎಂದು ಶಿವರಾಮಕೃಷ್ಣನ್ ಆರೋಪಿಸಿದ್ದು, ಇನ್ನು ಮುಂದೆ ಅವಕಾಶ ಆ ನೀಡದ ಆ ಕಂಪನಿಯ ಕುರಿತು ನಿಮಗೆಲ್ಲ ತಿಳಯುತ್ತದೆ ಎಂದು ಮಾಜಿ ಲೆಗ್ ಸ್ಪಿನ್ನರ್ ಹೇಳಿದ್ದಾರೆ.
ವೀಕ್ಷಕ ವಿವರಣೆಕಾರರ ಸ್ಥಾನಕ್ಕೆ ಶಿವರಾಮಕೃಷ್ಣನ್ ವಿದಾಯ




