ಬೆಳಗಾವಿ: ನಗರದ ಪೆಟ್ರೋಲ್ ಬಂಕ್ಗಳ ಮುಂದೆ ಸೃಷ್ಟಿಯಾಗಿರುವ “ತೈಲ ಆತಂಕ”ಕ್ಕೆ ಬ್ರೇಕ್ ಹಾಕಲು ಬೆಳಗಾವಿ ಪೊಲೀಸ್ ಇಲಾಖೆ ಈಗ ಫೀಲ್ಡ್ಗಿಳಿದಿದೆ. ವದಂತಿಗಳನ್ನು ನಂಬಿ ಜನರು ಮುಗಿಬೀಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪೆಟ್ರೋಲ್ ಬಂಕ್ ಮಾಲೀಕರೊಂದಿಗೆ ತುರ್ತು ಸಭೆ ನಡೆಸಿ ಕಟ್ಟುನಿಟ್ಟಿನ “ವಾರ್ನಿಂಗ್” ನೀಡಿದ್ದಾರೆ.
ಪೊಲೀಸ್ ಇಲಾಖೆಯ ‘ಬಿಗ್ ಅಲರ್ಟ್’ ಮುಖ್ಯಾಂಶಗಳು:
ನೋ ಸ್ಟಾಕ್ ಫಿಯರ್: ನಗರದಲ್ಲಿ ಇಂಧನ ದಾಸ್ತಾನು ಸಮರ್ಪಕವಾಗಿದೆ. ಸುಳ್ಳು ವದಂತಿಗಳನ್ನು ನಂಬಿ ಆತಂಕಕ್ಕೆ ಒಳಗಾಗಬೇಡಿ. ಬಾಟಲಿ-ಕ್ಯಾನ್ ನಿಷೇಧ: ಸುರಕ್ಷತೆಯ ದೃಷ್ಟಿಯಿಂದ ಬಾಟಲಿ ಅಥವಾ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಪೆಟ್ರೋಲ್/ಡೀಸೆಲ್ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

112 ಗೆ ಕರೆ ಮಾಡಿ: ಬಂಕ್ಗಳ ಬಳಿ ಯಾರಾದರೂ ಗಲಾಟೆ ಮಾಡಿದರೆ ಅಥವಾ ಅಶಿಸ್ತು ತೋರಿದರೆ ತಕ್ಷಣ ತುರ್ತು ಸಹಾಯವಾಣಿ 112 ಗೆ ಕರೆ ಮಾಡಲು ಸೂಚಿಸಲಾಗಿದೆ. 24 ಗಂಟೆ ಗಸ್ತು: ನಗರದ ಎಲ್ಲಾ ಪ್ರಮುಖ ಬಂಕ್ಗಳ ಬಳಿ ಹೊಯ್ಸಳ ಮತ್ತು ಪೊಲೀಸ್ ವಾಹನಗಳು ದಿನದ 24 ಗಂಟೆಯೂ ಪಹರೆ ನಡೆಸಲಿವೆ. ”ಸಾರ್ವಜನಿಕರ ಗಮನಕ್ಕೆ: ಪೆಟ್ರೋಲ್ ಬಂಕ್ಗಳಲ್ಲಿ ಲಭ್ಯವಿರುವ ಇಂಧನದ ಬಗ್ಗೆ ಯಾವುದೇ ಆತಂಕ ಬೇಡ. ಪ್ರತಿಯೊಂದು ಬಂಕ್ನಲ್ಲೂ ದಾಸ್ತಾನು ಕುರಿತು ಮಾಹಿತಿ ಫಲಕ ಹಾಕಲು ಸೂಚಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ.”
ಬೆಳಗಾವಿ ಪೊಲೀಸ್ ಇಲಾಖೆ ಬಂಕ್ ಮಾಲೀಕರಿಗೆ ಖಡಕ್ ಸೂಚನೆ:
ಪೊಲೀಸರು ನಡೆಸಿದ ತುರ್ತು ಸಭೆಯಲ್ಲಿ, ಬಂಕ್ ಮಾಲೀಕರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ಬಾಟಲಿಗಳಲ್ಲಿ ಇಂಧನ ನೀಡಿ ಅಪಾಯಕ್ಕೆ ದಾರಿ ಮಾಡಿಕೊಡಬಾರದು ಎಂದು ತಾಕೀತು ಮಾಡಲಾಗಿದೆ. ಅನಗತ್ಯವಾಗಿ ಕ್ಯೂ ನಿಂತು ಟ್ರಾಫಿಕ್ ಜಾಮ್ ಮಾಡದಂತೆ ಜನರಲ್ಲಿ ಮನವಿ ಮಾಡಲಾಗಿದೆ.
ಒಟ್ಟಿನಲ್ಲಿ, ಬೆಳಗಾವಿ ಪೊಲೀಸರ ಈ ‘ಹದ್ದಿನ ಕಣ್ಣು’ ಕಾರ್ಯಾಚರಣೆಯಿಂದ ನಗರದಲ್ಲಿ ಸೃಷ್ಟಿಯಾಗಿದ್ದ ಕೃತಕ ಅಭಾವದ ಆತಂಕಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ.
ವರದಿ:ಮಹಾಂತೇಶ್ ಎಸ್ ಹುಲಿಕಟ್ಟಿ




