ರಾಯಚೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಡಾ. ಎನ್ ಮೂರ್ತಿ ಸ್ಥಾಪಿತ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ೫೬,೪೩೨ ಉದ್ಯೋಗಗಳನ್ನು ನೇಮಕಾತಿ ಮಾಡಲು ಸಚಿವ ಸಂಪುಟ ಕೈಗೊಂಡಿರುವ ನಿರ್ಣಯವು ಒಳ ಮೀಸಲಾತಿ ಜಾರಿಗೆ ಮಾಡದೆ ಮುಂದಾಗಿರುವುದು ಖಂಡನೆಯ ಎಂದು ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ ಖಂಡನೆಯ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಮಾದಿಗ ಮತ್ತು ಮಾದಿಗ
ಸಂಬಂಧಿತ ಸಮುದಾಯಗಳು ನಿರಂತರ ೩೬ ವರ್ಷ ಹೋರಾಟ ಮಾಡುತ್ತಿದೆ ಸುಪ್ರೀಂ ಕೋರ್ಟ್ ಆದೇಶ ನೀಡಿ ಎರಡು ವರ್ಷಗಳೆ ಕಳೆದಿದೆ. ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ ಒಳ ಮೀಸಲಾತಿ ವಿದೇಯಕ ಅಂಗೀಕಾರಗೊಂಡು ರಾಜ್ಯಪಾಲರ ಸಹಿ ಪಡೆದು ಅಂಗೀಕೃತಗೊಂಡಿದೆ ಆದರೆ ಒಳ ಮೀಸಲಾತಿ ವಿರೋಧಿಗಳು ಒತ್ತಡಕ್ಕೆ ಮಣಿದು ೧೯೯೫ರ ಹಳೆ ನಿಯಮದಂತೆ ಉದ್ಯೋಗ ನೇಮಕಾತಿ ಮಾಡಲು ಮುಂದಾಗಿರುವುದು ಮಾದಿಗ ಸಂಬಂಧಿತ ಜಾತಿಗಳಿಗೆ ಮರಣ ಶಾಸನವಾಗಿದೆ…… ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ಅಳವಡಿಸಲು ತಾಂತ್ರಿಕ ಅಡಚಣೆ ಮತ್ತು ಕಾನೂನು ತೊಡಕು ಇದೆ ಎಂದು ನೆಪ ಎಳುವುದು ಮಾದಿಗ ಅಲೆಮಾರಿ ಜಾತಿಗಳಿಗೆ ಒಳ ಮೀಸಲಾತಿ ನೀಡದಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ೨೫ ಮಾರ್ಚ್೨೦೨೬ ರಂದು ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಶೋಕ ನಂಜನದಿನ್ನಿ. ಜಿಲ್ಲಾ ಉಪಾಧ್ಯಕ್ಷ ಎಂ. ಮನೋಹರ ಸಿರವಾರ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬೊಮ್ಮನಾಳ. ಜಿಲ್ಲಾ ಉಪಾಧ್ಯಕ್ಷ ಬಸವರಾಜ ನಾಡಂಗ. ಜಿಲ್ಲಾ ಕಾರ್ಯದರ್ಶಿ ಜಮದಾಗ್ನಿ. ಜಿಲ್ಲಾ ಸಂ, ಕಾರ್ಯದರ್ಶಿ. ಜಿಲ್ಲಾ ಸo. ಕಾರ್ಯದರ್ಶಿ ದುರ್ಗಪ್ಪ ಕಮಲಗೇರಾ. ಸಿಂಧನೂರು ತಾಲೂಕಾಧ್ಯಕ್ಷ ನಿರುಪಾದಿ ಎಲೆಕೂಡ್ಲಿಗಿ, ಮನವಿ ತಾಲೂಕ ಅಧ್ಯಕ್ಷ ಮಾರೆಪ್ಪ ಮಳ್ಳಿ ಸೇರಿದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ




