Ad imageAd image

ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ತಾಯಿ – ಮಾವನನ್ನೇ ಹತ್ಯೆಗೈದ ಅಪ್ರಾಪ್ತ : ಸುದ್ದಿ ಕೇಳಿ ಮಗಳು ಆತ್ಮಹತ್ಯೆಗೆ ಕಾರಣ ಯತ್ನ

Bharath Vaibhav
ಅಕ್ರಮ ಸಂಬಂಧ ಪ್ರಶ್ನಿಸಿದಕ್ಕೆ ತಾಯಿ – ಮಾವನನ್ನೇ ಹತ್ಯೆಗೈದ ಅಪ್ರಾಪ್ತ : ಸುದ್ದಿ ಕೇಳಿ ಮಗಳು ಆತ್ಮಹತ್ಯೆಗೆ ಕಾರಣ ಯತ್ನ
WhatsApp Group Join Now
Telegram Group Join Now

ಬೆಂಗಳೂರು: ಸಿಲಿಕಾನ್ ಸಿಟಿಯ ಪೀಣ್ಯದ ಹೆಚ್.ಎಂ.ಟಿ ಲೇಔಟ್‌ನಲ್ಲಿ ರಕ್ತಸಿಕ್ತ ಘಟನೆಯೊಂದು ನಡೆದಿದ್ದು, ಅಕ್ರಮ ಸಂಬಂಧದ ಕುರಿತಾದ ಜಗಳವು ಎರಡು ಕೊಲೆ ಹಾಗೂ ಒಂದು ಆತ್ಮಹತ್ಯೆ ಯತ್ನದಲ್ಲಿ ಅಂತ್ಯವಾಗಿದೆ.

ಘಟನೆಯ ಹಿನ್ನೆಲೆ:

ಪೀಣ್ಯ ನಿವಾಸಿ ಯಮುನಾ (36) ಹಾಗೂ ಅವರ ತಮ್ಮ ಸುದೀಪ್ (34) ಎಂಬುವವರನ್ನು 16 ವರ್ಷದ ಅಪ್ರಾಪ್ತ ಹುಡುಗನೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಸುದೀಪ್ ಹಾಗೂ ಯಮುನಾ ಅವರ ಕುಟುಂಬದ ನಡುವೆ ಇದ್ದ ಸಂಬಂಧ ಹಾಗೂ ಅದರಿಂದ ಉಂಟಾದ ಮನಸ್ತಾಪವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಮೂಲಗಳ ಪ್ರಕಾರ, ಅಕ್ರಮ ಸಂಬಂಧದ ವಿಚಾರವಾಗಿ ಪ್ರಶ್ನಿಸಲು ಹೋದಾಗ ಮಾತಿಗೆ ಮಾತು ಬೆಳೆದು, ಆಕ್ರೋಶಗೊಂಡ ಅಪ್ರಾಪ್ತನು ಯಮುನಾ ಮತ್ತು ಸುದೀಪ್ ಇಬ್ಬರನ್ನೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ತಾಯಿ-ಮಾವನ ಸಾವು ಕೇಳಿ ಪುತ್ರಿ ಆತ್ಮಹತ್ಯೆ ಯತ್ನ:

ತನ್ನ ತಾಯಿ ಯಮುನಾ ಹಾಗೂ ಮಾವ ಸುದೀಪ್ ಇಬ್ಬರೂ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಯಮುನಾ ಅವರ ಪುತ್ರಿ ತೀವ್ರ ಆಘಾತಕ್ಕೊಳಗಾಗಿದ್ದಾಳೆ. ಮನೆಯಲ್ಲಿದ್ದ ಆಸಿಡ್ ಕುಡಿದು ಆಕೆಯೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!