Ad imageAd image

ಪತ್ರಕರ್ತರ ಏಕಮತ ತೀರ್ಮಾನ : ಅಲ್ಲಾವುದ್ದೀನ್ ಶೇಖ್ ಅಧ್ಯಕ್ಷರಾಗಿ ಆಯ್ಕೆ

Bharath Vaibhav
ಪತ್ರಕರ್ತರ ಏಕಮತ ತೀರ್ಮಾನ : ಅಲ್ಲಾವುದ್ದೀನ್ ಶೇಖ್ ಅಧ್ಯಕ್ಷರಾಗಿ ಆಯ್ಕೆ
WhatsApp Group Join Now
Telegram Group Join Now

ಅಥಣಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಥಣಿ ತಾಲೂಕು ಘಟಕದಲ್ಲಿ ಏಕಮತದ ನಿರ್ಧಾರ ಕೈಗೊಳ್ಳಲಾಗಿದ್ದು, ಅಲ್ಲಾವುದ್ದೀನ್ ಶೇಖ್ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಮಧ್ಯಾಹ್ನ ಅಥಣಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಂಘಟನೆಯ ನೂತನ ಕಚೇರಿಯನ್ನು ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲೆ ಹಾಗೂ ಯೂಟ್ಯೂಬ್ ಸ್ಟಾರ್ ಬಸವರಾಜ್ ಸನದಿ ಉದ್ಘಾಟಿಸಿದರು.

ನಂತರ ನಡೆದ ಸಭೆಯಲ್ಲಿ ಮಲ್ಲಿಕಾರ್ಜುನ್ ಬಂಗ್ಲೆ ಅವರ ಸಮ್ಮುಖದಲ್ಲಿ ಅಲ್ಲಾವುದ್ದೀನ್ ಶೇಖ್ ಅವರನ್ನು ಅಧಿಕೃತವಾಗಿ ಅಧ್ಯಕ್ಷರಾಗಿ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಂಗ್ಲೆ, “ಜೀವನವು ಸಮಾಜ ಸೇವೆಗೆ ಮೀಸಲಾಗಿರಬೇಕು. ಭಯವಿಲ್ಲದೆ, ನಿಷ್ಠೆಯಿಂದ ಕೆಲಸ ಮಾಡುತ್ತಾ, ನಮ್ಮ ಕರ್ತವ್ಯದಿಂದ ಇತರರಿಗೆ ಉಪಯೋಗವಾಗುವಂತೆ ನಡೆದುಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಸಂಚಾಲಕರಾದ ಚಂದ್ರು ಸರ್, ಯೂಟ್ಯೂಬ್ ಸ್ಟಾರ್ ಬಸವರಾಜ ಸನದಿ, ಅಥಣಿ ಘಟಕದ ಉಪಾಧ್ಯಕ್ಷ ಅಜಯ ಕಾಂಬಳೆ, ಗೌರವಾಧ್ಯಕ್ಷ ರಶೀದ್ ಶೇಖ್, ಕಾರ್ಯದರ್ಶಿ ವಿಠ್ಠಲ ಖೋಕಾಟೆ, ಖಜಾಂಚಿ ಶಶಿಕಾಂತ್ ಪುಂಡಿಪಲ್ಲೆ, ಸದಸ್ಯರಾದ ಉಮರ್ ಮೂಮಿನ, ಲಕ್ಷ್ಮಣ ಮೂಕಿ, ಶಿವು ,ಸಂತೋಷ್ ಕಿರಣ , ಹನುಮಂತ ಕುರುಬರ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ :ಅಜಯ ಕಾಂಬಳೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!