ಬೆಂಗಳೂರು: ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಇಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಯ ೧೧ ನೇ ಪಂದ್ಯದಲ್ಲಿ ಚೆನ್ನೆöÊ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಸಾಯಂಕಾಲ ೭:೩೦ ಕ್ಕೆ ಆರಂಭವಾಗಲಿದೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದು ಹುರುಪಿನಲ್ಲಿರುವ ಆರ್ಸಿಬಿ ತಂಡ ಎರಡನೇ ಗೆಲುವಿನ ಉತ್ಸಾಹದಲ್ಲಿದೆ.
ಅತ್ತ ಹಿರಿಯ ಆಟಗಾರ ಎಂ.ಎಸ್. ಧೋನಿ ಗೈರು ಹಾಜರಿಯಲ್ಲಿ ಋತುರಾಜ್ ಗಾಯಕ್ವಾಡ ಸಾರಥ್ಯದ ತಂಡ ಫಾರ್ಮ್ ಹುಡುಕಾಟದಲ್ಲಿದೆ.
ಚೆನ್ನೆöÊ ತಂಡದಲ್ಲಿರುವ ಸಂಜು ಸ್ಯಾಮ್ಸನ್ ಮಿಂಚುತ್ತಿಲ್ಲ. ಶಿವಂ ದುಬೈ ಒಬ್ಬರೇ ಆ ತಂಡದ ಆಶಾ ಕಿರಣವಾಗಿದ್ದಾರೆ.




