ಸಿಂಧನೂರು : ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ದಿವಂಗತ ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಆಚರಿಸಿ ಕಲ್ಯಾಣ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹಂಪನಗೌಡ ಬಾದರ್ಲಿ,
ನಗರದ ಕುಷ್ಟಗಿ ರಸ್ತೆಯಲ್ಲಿರುವ ಜಗಜೀವನ್ ರಾಮ್ ಅವರ ನಾಮಫಲಕಕ್ಕೆ ಗಣ್ಯ ಮಾನ್ಯರು, ವಿವಿಧ ಇಲಾಖೆ ಅಧಿಕಾರಿಗಳು ಸಂಘ ಸಂಸ್ಥೆಗಳಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ತಾಸಿಲ್ ಕಚೇರಿವರೆಗೆ ಭವ್ಯವಾದ ಮೆರವಣಿಗೆ ಮೂಲಕ ಆಗಮಿಸಿ ತಾಲೂಕ ಆಡಳಿತದಿಂದ ಜಯಂತಿಯನ್ನು ಆಚರಿಸಿದರು
ಏಪ್ರಿಲ್ 5 ಜಯಂತಿ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9:30ಕ್ಕೆ ಜಗಜೀವನ್ ರಾಮ್ ಸರ್ಕಲ್ ನಿಂದ ತಾಲೂಕ ಆಡಳಿತ ಕಚೇರಿ ಯವರಿಗೆ ಮೆರವಣಿಗೆಯ ಮೂಲಕ ಚಾಲನೆ ನೀಡಲಾಯಿತು ನಗರದ ರೈಲ್ವೆ ಸ್ಟೇಷನ್ ಹತ್ತಿರ ಇರುವ 1 ಎಕರೆ ಜಮೀನಿನಲ್ಲಿ ಜಗಜೀವನ್ ರಾಮ್ ಅವರ ಕಲ್ಯಾಣ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು
ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ.ಆರ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ. ಜೆಡಿಎಸ್ ಮುಖಂಡ ಚಂದ್ರ ಗೋಪಾಲ್ ನಾಡಗೌಡ. ಮುಖಂಡರಾದ ಅಲ್ಲಮಪ್ರಭು ಪೂಜಾರ್. ಆರ್.ಅಂಬ್ರೋಸ್ ಕೊಡ್ಲಿ. ಮರಿಯಪ್ಪ ಜಾಲಿಹಾಳ. ಮರಿಯಪ್ಪ ಬಿಎಸ್ಪಿ. ಸುಭಾಷ್ ಪ್ರಾಂಕ್ಲಿನ್.ಅಂಬರೀಶ್ ಗಿರಿಜಾಲಿ.ಹನುಮಂತಪ್ಪ ಮುದ್ದಾಪುರ.ನರಸಪ್ಪ ಕಟ್ಟಿಮನಿ. ಮಹದೇವ ಧುಮುತಿ. ಹನುಮಂತಪ್ಪ ಗೊಮರ್ಶಿ.ಸಂಗಮೇಶ್ ಮುಳ್ಳೂರು. ಛತ್ರಪ್ಪ ಬಸಾಪುರ. ಪಂಪಾಪತಿ ಹಂಚಿನಾಳ ಇದ್ದರು
ವರದಿ: ಬಸವರಾಜ ಬುಕ್ಕನಹಟ್ಟಿ




