ಸಿಂಧನೂರು: ಡಾ. ಬಿ.ಆರ್.ಅಂಬೇಡ್ಕರ್ ನಗರದ ದಲಿತ ಹಿರಿಯ ಮುಖಂಡ ಮರಿಯಪ್ಪ ಬಿಎಸ್ಪಿ ಅವರ ನಿವಾಸದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿಯನ್ನು ಅತ್ಯಂತ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಿ ಮಾತನಾಡಿ
೧೮೨೭ ರಲ್ಲಿ ಮಹಾರಾಷ್ಟ್ರದ ಕಟಗುಣದಲ್ಲಿ ಎಪ್ರಿಲ್ ೧೧ ರಂದು ಮಹಾತ್ಮ ಜ್ಯೋತಿಬಾ ಫುಲೆ ರವರು ಜನಿಸಿದರು.
ಭಾರತದ ಶ್ರೇಷ್ಠ ಸಮಾಜ ಸುಧಾರಕರು, ಶಿಕ್ಷಣ ತಜ್ಞರು ಮತ್ತು ಚಿಂತಕರಾಗಿದ್ದರು. ಮಹಿಳಾ ಶಿಕ್ಷಣ, ಅಸ್ಪೃಶ್ಯತೆ ನಿವಾರಣೆ ಮತ್ತು ಕೆಳಜಾತಿಯವರ ಹಕ್ಕುಗಳಿಗಾಗಿ ಹೋರಾಡಿದ ಅವರು, ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿದರು. ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಸೇರಿ ಭಾರತದ ಮೊದಲ ಬಾಲಕಿಯರ ಶಾಲೆಯನ್ನು ಪ್ರಾರಂಭಿಸಿದರು ಎಂದು ದಲಿತ ಮುಖಂಡ ಮರಿಯಪ್ಪ ಬಿಎಸ್ಪಿ ಹೇಳಿದರು.
ಈ ವೇಳೆ ಹೆಚ್. ಸುಲಂಗಿ. ಪಿಎಸ್. ಕೊಟ್ರೇಶ್. ನಾಗರಾಜ ಬಾಲಿ. ಮುದುಕಪ್ಪ ಟೇಲರ್. ಸೇರಿದಂತೆ ಅನೇಕರು ಇದ್ದರು.
ವರದಿ : ಬಸವರಾಜ ಬುಕ್ಕನಹಟ್ಟಿ.




