ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ವನ್ನು ಹಾರಕೂಡ ಶ್ರೀ ಚನ್ನಬಸವೇಶ್ವರ ತಾಲ್ಲೂಕು ಹವ್ಯಾಸಿ ಕಲಾವಿದರ ನಾಟಕ ಸಂಘ ಚಿಂಚೋಳಿ ವತಿಯಿಂದ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಒಂದು ಕಾರ್ಯಕ್ರಮದ ಸನ್ಮಾನಿತ್ತರಾದ ಶಂಕರ ಹೂವಿನ ಹಿಪ್ಪರಗಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ನಾಟಕ ಬರಹಗಾರ ಸಂಘ ಬೆಂಗಳೂರು ಡಾ.ನರಸಮ್ಮ ಲಕ್ಷ್ಮಣ ಅವುಂಟಿ ಅಧ್ಯಕ್ಷರು ಶ್ರೀ ಶಕ್ತಿ ಒಕ್ಕೂಟ ಸಂಘ ಚಿಂಚೋಳಿ ಡಾ.ಮಲ್ಲಿಕಾರ್ಜುನ ಪಾಲಮೂರ ಪ್ರಾಂಶುಪಾಲರು ಚಿಂಚೋಳಿ ಸುನಿಲಕುಮಾರ ಮೇತ್ರಿ ನೂತನ ಗ್ರಾ.ಪಂ ಅಧ್ಯಕ್ಷರು ಕನಕಪುರ. ಶಿವರಾಜ್ ಪಾಟೀಲ್ ರೈತ ಸಂಘ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಬುರಗಿ ಎಲ್ಲಾ ಮಾಹನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು ಎಂದು ನಾಟಕ ಸಂಘ ಅಧ್ಯಕ್ಷರಾದ ಶಾಮರಾವ್ ಕೋರವಿ ಹಾಗೂ ಜಗನಾಥ ಕಟ್ಟಿ ತಿಳಿಸಿದರು ಈ ಸಂದರ್ಭದಲ್ಲಿ ಲಕ್ಷ್ಮಣ ಅವುಂಟಿ ರೇವಣಸಿದ್ದಪ್ಪ ಅಣಕಲ್ ಮುಂತಾದವರು ಉಪಸ್ಥಿತಿ ಇದ್ದರು.
ವರದಿ:ಸುನಿಲ್ ಸಲಗರ




