ನಿಡಗುಂದಿ:- ತಾಲೂಕ ಕನ್ನಡ ರಾಜ್ಯೋತ್ಸವದ ಪೂರ್ವ ಭಾವಿ ಸಭೆ ನಡೆಸಲಾಯಿತು, ಈ ಕಾರ್ಯಕ್ರಮವನ್ನು ಉದ್ದೇಶಿಸಿ ದಂಡಾಧಿಕಾರಿಗಳು ಮಾತನಾಡಿದರು,ಕನ್ನಡ ಪರ ಹೋರಾಟಗಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕ ವೃಂದ, ಸರ್ಕಾರಿ ಎಲ್ಲ ಕಚೇರಿಯ ಸಿಬ್ಬಂದಿ ವರ್ಗ ಸಾರ್ವಜನಿಕರು ಸೇರಿ ಶ್ರೀ ದ್ಯಾಮವ್ವ ಗುಡಿಯಿಂದ, ಹಳೇಬಸ್ ನಿಲ್ದಾಣ-ಟಿವಿಎಸ್ ಶೋರೋಮ್ ಹಾಗೂ ಹೊಸ ಬಸ್ ನಿಲ್ದಾಣದವರೆಗೆ ಕನ್ನಡ ಮಾತೆಯ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ, ಮೆರವಣಿಗೆಯೊಂದಿಗೆ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಸೇರಿ ರಾಷ್ಟ್ರಧ್ವಜವನ್ನು ಹಾರಿಸಿವದು.
ವಿವಿಧ ಶಾಲಾ ಮಕ್ಕಳಿಂದ ಸಂಸ್ಕೃತ ಕಾರ್ಯಕ್ರಮ, ಕನ್ನಡ ನಾಡು ನುಡಿ ಜಲದ ಬಗ್ಗೆ ಭಾಷಣ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಸಂತ ರಾಠೋಡ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಜಂಬಕ್ಕ ಲಕ್ಷ್ಮಣ ವಿಭೂತಿ, ವಿರೇಶ ಹಟ್ಟಿ ಮುಖ್ಯಾಧಿಕಾರಿ,ಶಿಲ್ಪಾ ಹಿರೇಮಠ ಸಿ.ಡಿ.ಪಿ.ಓ, ಹಾಜಿಮಸ್ತಾನ್ ಹೆಬ್ಬಾಳನ ಹಾಗೂ ಕನ್ನಡ ಸಂಘಟನೆ ಹೋರಾಟಗಾರರು ಸಂತೋಷ ಕಡಿ, ಆನಂದ ಮೊಪಗಾರ, ಚಂದ್ರು ಹಳೆಮನಿ, ನವೀನ ಅಂಕದ, ರೆಹಮಾನ ಮಕಾಂದಾರ, ಬಾಬು ಮುಚ್ಚಂಡಿ, ಸಾರ್ವಜನಿಕರು ಹಾಗೂ ವಿವಿಧ ಶಾಲೆಯ ಮುಖ್ಯಸ್ಥರು ಶಿಕ್ಷಕರು ಹಾಜರಿದ್ದರು.
ವರದಿ :ಅಲಿ ಮಕಾನದಾರ