Ad imageAd image

ಶ್ರೀ ಜಗದೀಶ ಶೆಟ್ಟರ ರವರ ಅಭಿನಂದನಾ ಕಾರ್ಯಕ್ರಮ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ :-  ದಿನಾಂಕ 21/06/2024 ರಂದು ಸಂಗಮೇಶ್ವರ ನಗರ ಬೆಳಗಾವಿ ಯಲ್ಲಿ ಬೆಳಗಾವಿ ಜಿಲ್ಲಾ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ (ರಿ) ವತಿಯಿಂದ ಬೆಳಗಾವಿ ಲೋಕಸಭೆಗೆ ನೂತನ ಸಂಸದರಾಗಿ ಆಯ್ಕೆಯಾದ ಶ್ರೀ ಜಗದೀಶ ಶೆಟ್ಟರ ರವರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಅಭಿನಂದಿಸಿಲಾಯಿತು.

ಹಾಗು ಈ ಸಮಾರಂಭದಲ್ಲಿ ಹೂಗಾರ ಸಮಾಜದ ಹಿತಚಿಂತಕರಾದ ಶ್ರೀ ಭೀಮಶಿ ಅಣ್ಣಾ ಜಾರಕಿಹೊಳಿ, ಶ್ರೀ ಭರತೇಶ ಅಣ್ಣಾ ಡೊಂಗರೆ ರವರನ್ನು ಅಭಿನಂದಿಸಿ ಸತ್ಕರಿಸಲಾಯಿತು ಹಾಗೂ ಸನ್ಮಾನ ಸ್ವೀಕರಿಸಿದ ಗಣ್ಯರು ಹೂಗಾರ ಸಮಾಜದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಶಿವಾನಂದ ಹೂಗಾರ, ಉಪಾಧ್ಯಕ್ಷರಾದ ಶ್ರೀ ಪ್ರಭು ಹೂಗಾರ, ಪ್ರ ಕಾರ್ಯದರ್ಶಿ ಶ್ರೀ ಮೋಹನ ಹೂಗಾರ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮೋಹನ ಶಂ ಹೂಗಾರ, ಶ್ರೀ ಅರ್ಜುನ ಹೂಗಾರ, ಖಜಾಂಚಿ ಶ್ರೀ ಡಿ ಎಸ್ ಹೂಗಾರ, ಶ್ರೀ ಮಹಾದೇವಪ್ಪಾ ಹೂಗಾರ, ಕಾರ್ಯದರ್ಶಿ ಶ್ರೀ ಮಾರುತಿ ಗುರವ , ಸಂಘದ ಕಾರ್ಯಕಾರಿ ಸದಷ್ಯರಾದ ಶ್ರೀ ವಿವೇಕಾನಂದ ಹೂಗಾರ, ಶ್ರೀ ಬಸವರಾಜ ಹೂಗಾರ, ಶ್ರೀ ಭರತ ಹೂಗಾರ, ಶ್ರೀ ರಾಜು ಗುರವ, ಶ್ರೀ ಸಂತೋಷ ಜುಮನಾಳ, ಶ್ರೀಮತಿ ರಾಜೇಶ್ವರಿ ಗುರವ, ಶ್ರೀಮತಿ ದ್ರಾಕ್ಷಾಯಣಿ ಹೂಗಾರ, ಶ್ರೀಮತಿ ಮಹಾದೇವಿ ಹೂಗಾರ, ಹಿರಿಯರಾದ ಶ್ರೀ ಎಲ್ ಕೆ ಗುರವ, ಶ್ರೀ ಬಿ ಎಮ್ ಹೂಗಾರ, ಶ್ರೀ ಶಿವಪ್ಪಾ ಹೂಗಾರ, ಮಹಾದೇವ ಹೂಗಾರ, ನಗರ ಸೇವಕಿ ಶ್ರೀಮತಿ ರೇಖಾ ಮ ಹೂಗಾರ ಸಮಾಜದ ಪ್ರಮುಖರು ಭಾಗವಹಿಸಿದ್ದರು

ವರದಿ :-ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!