Ad imageAd image

ದಲಿತರ ಮೇಲಿನ ಹಲ್ಲೆ ಖಂಡಿಸಿ ಬಾದಾಮಿಯಲ್ಲಿ ಉಗ್ರ ಪ್ರತಿಭಟನೆಯ ಪೂರ್ವಭಾವಿ ಸುದ್ದಿಗೋಷ್ಠಿ

Bharath Vaibhav
ದಲಿತರ ಮೇಲಿನ ಹಲ್ಲೆ ಖಂಡಿಸಿ ಬಾದಾಮಿಯಲ್ಲಿ ಉಗ್ರ ಪ್ರತಿಭಟನೆಯ ಪೂರ್ವಭಾವಿ ಸುದ್ದಿಗೋಷ್ಠಿ
WhatsApp Group Join Now
Telegram Group Join Now

ಬಾದಾಮಿ :-ತಾಲೂಕಿನ ಉಗಲವಾಟ ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಪ್ರಸಾದ ಸೇವೆಯಲ್ಲಿ ಊಟ ಮಾಡಿ ದೇಗುಲದ ಒಳಗೆ ಪ್ರವೇಶ ಮಾಡಿದ್ದಕ್ಕೆಉಗಲವಾಟ ಗ್ರಾಮದ ಸವರ್ಣಿಯರು ದಲಿತ ಅರ್ಜುನ್ ಎಂಬುವವನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದನ್ನು ಖಂಡಿಸಿ ಹಾಗೂ ಪೊಲೀಸ್ ಅಧಿಕಾರಿಗಳು ಸುಳ್ಳು ಕೇಸ ದಾಖಲು ಮಾಡುತ್ತಿರುವುದರ ಕುರಿತು ದಲಿತಪರ ಸಂಘಟನೆಗಳು ಇದೇ ತಿಂಗಳು 24/09/2024 ಮಂಗಳವಾರದಂದು ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ಎಲ್ಲಾ ದಲಿತಪರ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ..ಈ ಬಗ್ಗೆ ಪೂರ್ವಭಾವಿಯಾಗಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ್ದಾರೆ.ಸುದ್ದಿ ಗೋಷ್ಟಿಯಲ್ಲಿ ಸಂಘಟನೆಗಳ ಮುಖಂಡರಾದ ರುದ್ರೇಶ್ ಹುನಸಿಗಿಡದ, ಹುಳಗಪ್ಪ. ಭೋವಿ, ಮಂಜುನಾಥ ಮಾದರ, ಯಲ್ಲಪ್ಪ. ಮಾದರ, ಹೊಳಿಯಪ್ಪ ಮಾದರ, ರಂಗನಾಥ ಕಾತರಕಿ, ಕನಕಪ್ಪ ಮಾದರ, ಬಸವರಾಜ್ ಮಾದರ, ಚಕ್ರಪ್ಪ ತಳಗಿನಮನಿ, ಕನಕಪ್ಪ. ಎಂ. ಮಾದರ ಇನ್ನೂ ಅನೇಕರು ಉಪಸ್ಥಿತರಿದ್ದರು.

ವರದಿ:-ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!