ಸಿಂದಗಿ: ಯಲ್ಲಾಪುರದ ದಲಿತ ಮಹಿಳೆ ರಂಜಿತಾ ಬರ್ಬರ ಹತ್ಯ ವಿರೋಧಿಸಿ ಪ್ರತಿಭಟಿಸಿ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ನೀಡಿ ವ್ಹಿ ಎಚ್ ಪಿ ಪ್ರಾಂತ ಪ್ರಮುಖ ಶೇಖರಗೌಡ ಹರನಾಳ ಮಾತನಾಡಿ ಯಲ್ಲಾಪುರದ ರಾಮಪುರ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿ ತನ್ನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದ ಕಡುಬಡತನದ ಹಿಂದೂ ಹೆಣ್ಣು ಮಗಳಾದ ರಂಜಿತಾಳ ಬರ್ಬರ ಹತ್ಯಾ ಖಂಡ ನಾರ್ಯ ರಂಜಿತಾಳ ಹತ್ಯೆ ಮಾಡಿದ ಮುಸ್ಲಿಂ ಜಿಹಾದಿ ರಫೀಕ್ ಹಿಂದೂ ಸಮಾಜಕ್ಕೆ ಹೆದರಿ ಆತ್ಮಹತ್ಯಾ ಮಾಡಿಕೊಂಡಿರಬಹುದು ಆದರೆ ಆತನಿಗೆ ಈ ಹತ್ಯೆ ಯಲ್ಲಿ ಕುಮ್ಮಕ್ಕು ಕೊಟ್ಟವರನ್ನು ಬಂದಿಸಲೇಬೇಕು ಎಂದು ಸರಕಾರಕ್ಕೆ ಮನವಿ ಮಾಡಿ ಆಗ್ರಹ ಪಡಿಸಿ ಈ ಹಿಂದೆ ಹುಬ್ಬಳ್ಳಿ ಕಾಲೇಜಿನಲ್ಲಿ ನೇಹಾ ಹಿರೇಮಠಳನ್ನು ಕಗ್ಗೊಲೆ ಮಾಡಿದ ಮತಾಂದ ಪಯಾಝನ ಪ್ರಕರಣ,ಗದುಗಿನ ಅಪೂರ್ವ ಪುರಾಣಿಕ್ ಪ್ರಕರಣ ವಿಜಯಲಕ್ಷ್ಮೀ ತಳವಾರ ಜಿಹಾದಿ ಸದ್ದಾಂನಿಂದ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ಪ್ರಕರಣ ಜಿಹಾದ್ ನಿಂದ ಮಾಡುವ ವಿವಿಧ ಕರಾಳ ಮುಖಗಳಾಗಿವೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆಯಲ್ಲಿ ತೊಡಗಿರುವುದರಿಂದ ನಿಷ್ಪಕ್ಷಪಾತ ತನಿಖೆಯಾಗಲಿ ಈ ಎಲ್ಲ ಪ್ರಕರಣಗಳನ್ನು ಎನ್ ಆಯ್ ಎಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು ಹಾಗೆಯೇ ಜ 01 -2026 ರಂದು ವಿಜಯಪುರದಲ್ಲಿ ಕಾಲೇಜು ಸ್ಥಾಪನೆಗಾಗಿ ಹೋರಾಟ ಮಾಡುತ್ತಿರುವ ರೈತ ಮುಖಂಡರು ಮಠಾಧೀಶರು ದಲಿತ ಮುಖಂಡರು ವಿವಿಧ ಸಮಾಜ ಮತ್ತು ಸಂಘಟನೆ ಮುಖಂಡರನ್ನು ಪೊಲೀಸ್ ಇಲಾಖೆ ಬಂದಿಸಿದ್ದು ಈ ಕೂಡಲೆ ಎಲ್ಲಾ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿಕೊಂಡರು, ದಲಿತ ಯುವ ಮುಖಂಡರಾದ ಭೀಮಾಶಂಕರ ರತ್ನಾಕರ ಮಾತನಾಡಿ ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಈ ಎಲ್ಲಾ ಕೊಲೆಗಳಿಗೆ ಮೂಲ ಜಿಹಾದ್ ಹಿಂತಾ ಪ್ರಕರಣಗಳನ್ನು ನಾವು ಪಾಕಿಸ್ತಾನ, ಬಾಂಗ್ಲಾದೇಶ ಗಳಲ್ಲಿ ನಡೆಯುದನ್ನು ನೋಡುತ್ತಿದ್ದೆವು ಆದರೆ ಈಗ ಕರ್ನಾಟಕದಲ್ಲಿಯೂ ನೋಡುವ ಪರಸ್ಥಿತಿ ಬಂದಿದೆ ಹಿಂತ ಪ್ರಕರಣಗಳನ್ನು ನಿಭಾಯಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರವನ್ನು ದೂರಿದರು ಈ ಸಂದರ್ಭದಲ್ಲಿ ವ್ಹಿ ಎಚ್ ಪಿ ನಗರ ಅದಕ್ಷರಾದ ಬಸನಗೌಡ ಬೆನ್ನಟ್ಟಿ ಪ್ರಮುಖರಾದ ನಂದೀಶ ನಂದರಗಿ ರಾಯಪ್ಪ ಬಡಿಗೇರ ಶಿವರಾಜ ಸಿದ್ದು ಅನಿಲ, ಚಂದನಗೌಡ,ಜಗದೀಶ,ಬಸನಗೌಡ, ರಮೇಶ, ಹಣಮಂತ, ಹಾಗೇ ದಲಿತ ಮುಖಂಡರಾದ ಪರಶುರಾಮ ಕುಮಸಗಿ,ರಮೇಶ ಗನ್ನಾ ಪುರ, ದತ್ತು ಹೊಸಮನಿ, ಏಕನಾಥ ದ್ಯಶಾಳ,ಮುಕೇಶ ಬಡಿಗೇರ, ಬಸು ಖಾನಾಪುರ, ಲಕ್ಷ್ಮಣ ಇನ್ನು ಅನೇಕ ಪ್ರಮುಖರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಈ ಪ್ರತಿಭಟನೆ ನೇತೃತ್ವ ಸಿಂದಗಿ ತಾಲೂಕ ವ್ಹಿ ಎಚ್ ಪಿ ಕಾರ್ಯದರ್ಶಿ ಬಸವರಾಜ ಬಿರಾದಾರ ಇದ್ದರು.
ವರದಿ : ಸಾಯಬಣ್ಣ ಮಾದರ




