Ad imageAd image
- Advertisement -  - Advertisement -  - Advertisement - 

ಕರೆಂಟ್ ವೈರ್ ಶಾಕ್,ಬೆಂಕಿ ತಗುಲಿ ನಷ್ಟ ,ಕುಟುಂಬಕ್ಕೆ ಸರಕಾರ ಸಹಾಯ ನೀಡಬೇಕೆಂದು ಮನವಿ.

Bharath Vaibhav
ಕರೆಂಟ್ ವೈರ್ ಶಾಕ್,ಬೆಂಕಿ ತಗುಲಿ ನಷ್ಟ ,ಕುಟುಂಬಕ್ಕೆ ಸರಕಾರ ಸಹಾಯ ನೀಡಬೇಕೆಂದು ಮನವಿ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಕೋಲಕುಂದ ಗ್ರಾಮದ ದಲಿತ ಸಮಾಜದ ಹುಸೇನಪ್ಪ ತಂದೆ ಮೋಗಲಪ್ಪ ಮಸೆಪೊಳ್ಳು ಎಂಬುವವರ ಮನೆಗೆ ಕರೆಂಟ್ ವೈರ್ ತಗುಲಿ ಶಾಕಿನಿಂದ ಮನೆಗೆ ಬೆಂಕಿ ಅವಘಡ ಸಂಭವಿಸಿ ಒಂದು ಲಕ್ಷ ರೂಪಾಯಿ 500ರೂಪಾಯಿ ನೋಟುಗಳು, ಎರಡು ತೋಳಿ ಬಂಗಾರ, ಎರಡು ಕ್ವಿಂಟಾಲ್ ಜೋಳ, ಒಂದು ಕ್ವಿಂಟಾಲ್ ಅಕ್ಕಿ ಮತ್ತು ನಾಲ್ಕು ಚೀಲ ಶೇಂಗಾ ಕಾಯಿ ಬೇಳೆ ಸೇರಿದಂತೆ ಮನೆಯಲ್ಲಿ ಬಟ್ಟೆ ಜೊತೆಗೆ ಎಲ್ಲಾ ಸಾಮಗ್ರಿಗಳು ಸುಟ್ಟು ಹೋಗಿರುತ್ತವೆ.

ಅದ ಕಾರಣ ಸರಕಾರದಿಂದ ಸಿಗುವ ಆರ್ಥಿಕ ಸಹಾಯಧನ ಆ ಬಡ ಕುಟುಂಬಕ್ಕೆ ಸಿಗುವಂತೆ ಮಾಡಬೇಕೆಂದು ತಾಲೂಕ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಕೋಲುಕುಂದ ಗ್ರಾಮ ಪಂಚಾಯತ್ ಸದಸ್ಯರಾದ ಹುಸೇನಪ್ಪ ಪಿರಂಗಿ ಅವರು ಪತ್ರಿಕಾ ಪ್ರಕಟಣೆಯ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!