Ad imageAd image

ಜೇನುಕೃಷಿ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ಮುಕ್ಕಡನಹಳ್ಳಿ ಗ್ರಾಮದಲ್ಲಿ ವಿಚಾರ ಸಂಕಿರಣ ನೆಡೆಸಲಾಯಿತು

Bharath Vaibhav
ಜೇನುಕೃಷಿ ಮತ್ತು ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ಮುಕ್ಕಡನಹಳ್ಳಿ ಗ್ರಾಮದಲ್ಲಿ ವಿಚಾರ ಸಂಕಿರಣ ನೆಡೆಸಲಾಯಿತು
WhatsApp Group Join Now
Telegram Group Join Now

ಚಾಮರಾಜನಗರ :  ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕೃಷಿ ಮಹಾವಿದ್ಯಾಲಯ ಚಾಮರಾಜನಗರದ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2025-26ರಲ್ಲಿ ದಿನಾಂಕ 10-09-2025ರಂದು “ಜೇನು ಕೃಷಿ ಹಾಗೂ ಕೀಟನಾಶಕಗಳ ಸುರಕ್ಷಿತ ಬಳಕೆ ವಿಚಾರ ಸಂಕಿರಣ ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಯಿತು.

ನಿಂಗರಾಜ್, . ಜ್ಞಾನೆಶ್, ಇಂದಿನ ವಿಷಯದ ಬಗ್ಗೆ ಪೋಸ್ಟರ್ಸ್ಗಳು, ಚಾರ್ಟಗಳು ಹಾಗೂ ಪವರ್ ಪಾಯಿಂಟ್ ಗಳ ಮೂಲಕ ತಮ್ಮ ವಿಚಾರವನ್ನು ರೈತರ ಮುಂದೆ ಪ್ರಸ್ತುತ ಪಡಿಸಿದರು

ಈ ಸಂಕಿರಣದಲ್ಲಿ ಜೇನುನೊಣ ಪ್ರಭೆದಗಳು,ಅದರ ಚಟುವಟಿಕೆ,ಸಾಕುವ ರೀತಿ , ಇಳುವರಿ ಹೆಚ್ಚುಸುವಲ್ಲಿ ಜೇನುನೊಣಗಳ ಮಹತ್ವ ಹಾಗೂ ತೋಟಗಾರಿಕ ಇಲಾಖೆಯಲ್ಲಿ ದೋರಕುವ ಸಬ್ಸಿಡಿ ಕುರಿತು ಮತ್ತು ಕೀಟನಾಶಕಗಳನ್ನು ಬಳಸುವ ಮುಂಚೆ,ಬಳಸಿದ ನಂತರ ಎದುರಾಗುವ ಸಮಸ್ಯೆಗಳಿಗೆ ಮುಂಜಾಗ್ರತೆಯಾಗಿ ಕೈಗೊಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ಡಾ,ಮೌಲ್ಯ ಅವರು ಜೇನುಕೃಷಿ: ಗ್ರಾಮೀಣ ಆರ್ಥಿಕತೆಗೆ ಸಿಹಿ ಬೆಂಬಲ–ಜಾಗೃತಿಯಿಂದ ಕೀಟನಾಶಕ ಬಳಕೆ – ಪರಿಸರ ಮತ್ತು ರೈತರ ರಕ್ಷಣೆಗೆ”ಉಪಕಾರಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜನರೈತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಕಾರ್ಯಕ್ರದಲ್ಲಿ ಡಾ,ಮೌಲ್ಯ ಎಂ.ಆರ್,ಸಹಾಯಕ ಪ್ರಾಧ್ಯಾಪಕರು ಕೀಟಶಾಸ್ತ್ರ ವಿಭಾಗ ಇವರು ಉಪಸ್ತಿತರಿದ್ದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!