Ad imageAd image

ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ: ಯಾದಗಿರಿಯಲ್ಲಿ ಮೂವರ ಬರ್ಬರ ಹತ್ಯೆ

Bharath Vaibhav
ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ: ಯಾದಗಿರಿಯಲ್ಲಿ ಮೂವರ ಬರ್ಬರ ಹತ್ಯೆ
WhatsApp Group Join Now
Telegram Group Join Now

ಯಾದಗಿರಿ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಯಾದಗಿರಿಯಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯಾದಗಿರಿ ತಾಲೂಕಿನ ಸೈದಾಪುರ ಬಳಿ ಈ ಘಟನೆ ನಡೆದಿದೆ. ಮೃತರನ್ನು ಅನ್ನಪೂರ್ಣ, ಕವಿತಾ, ಬಸವರಾಜಪ್ಪ ಎಂದು ಗುರುತಿಸಲಾಗಿದೆ. ಪತಿಯೇ ತನ್ನ ಪತ್ನಿ, ಅತ್ತೆ, ಮಾವನನ್ನು ಬರ್ಬರವಾಗಿ ಕೊಂದಿದ್ದಾನೆ.

ಕಬ್ಬಿಣದ ಚಾಕು, ರಾಡ್ ನಿಂದ ಹೊಡೆದು ಮೂವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮೃತರು ದಾವಣಗೆರೆ ಮೂಲದವರಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾದಗಿರಿಯ ಮುನಗಲ್ ಗ್ರಾಮದ ನವೀನ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!