ಮುದಗಲ : ಪಟ್ಟಣದ ಪುರಸಭೆ ಯಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ರವಿವಾರ ಸರಳವಾಗಿ ಆಚರಿಸಲಾಯಿತು. ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ ಅವರು ಮಹಾಯೋಗಿ ವೇಮನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಯ ಮುದಗಲ್ಲ ಅಧ್ಯಕ್ಷ ರಾದ ಬಸವರಾಜ ಬಂಕದಮನಿ ಅವರು ಮಾತನಾಡಿದರು ಮಹಾತ್ಮರು ಸಮಾಜದ ಅಭಿವೃದ್ಧಿಗಾಗಿ ಹಲವು ಸಂದೇಶಗಳನ್ನು ನೀಡಿದ್ದಾರೆ. ಯೋಗಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ ,ಬಸವರಾಜ ಬಂಕದಮನಿ , ಬಸವರಾಜ , ಸುರೇಶ್ ಪತ್ತಾರ , ಹೈಮದ್ ಜಮೀದಾರ್ ,ಲಖನ್ , ಚಂದ್ರು ,ವಿನೋದ್, ಯಂಕಣ್ಣ ದೇಶಪಾಂಡೆ, ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ