Ad imageAd image

ಹುಡುಗಿಗೆ ಚುಡಾಯಿಸಬೇಡ ಬುದ್ಧಿ ಹೇಳಿದ್ದಕ್ಕೆ ಮಹಿಳೆಗೆ ಚಾಕು ಇರಿತ : ದುಷ್ಟ ಅರೆಸ್ಟ್ 

Bharath Vaibhav
ಹುಡುಗಿಗೆ ಚುಡಾಯಿಸಬೇಡ ಬುದ್ಧಿ ಹೇಳಿದ್ದಕ್ಕೆ ಮಹಿಳೆಗೆ ಚಾಕು ಇರಿತ : ದುಷ್ಟ ಅರೆಸ್ಟ್ 
CRIME
WhatsApp Group Join Now
Telegram Group Join Now

ಹುಬ್ಬಳ್ಳಿ : ಕಳೆದ ಕೆಲವು ತಿಂಗಳ ಹಿಂದೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ್ ಹಾಗೂ ಅಂಜಲಿ ಅಂಬಿಗರ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಹುಡುಗಿಗೆ ಚುಡಾಯಿಸಬೇಡ ಎಂದು ಮಹಿಳೆಯೊಬ್ಬರು ಯುವಕನಿಗೆ ಬುದ್ಧಿ ಹೇಳಿದ್ದಾರೆ.

ಇದರಿಂದ ಆಕ್ರೋಶಗೊಂಡ ಯುವಕ ಮಹಿಳೆಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿಯ ಲೋಹಿಯ ನಗರದಲ್ಲಿ ನಡೆದಿದೆ.

ಹುಬ್ಬಳ್ಳಿಯ ಲೋಹಿಯ ನಗರದಲ್ಲಿ ಮಹಿಳೆಗೆ ಚಾಕು ಹಿಡಿದಿರುವ ಘಟನೆ ನಡೆದಿದೆ. ನೀಲಾ ಹಡಪದ ಎನ್ನುವ ಮಹಿಳೆಗೆ ಮಹೇಶ ವ್ಯಕ್ತಿ ಚಾಕು ಇರಿದು ಪರಾರಿಯಾಗಿದ್ದಾನೆ. ಹುಡುಗಿ ಚುಡಾಯಿಸಿದ್ದಕ್ಕೆ ನೀಲಾ ಮಹೇಶ್ ಗೆ ಬುದ್ಧಿ ಹೇಳಿದರು. ಬುದ್ಧಿ ಹೇಳಿದ್ದಕ್ಕೆ ಆಕ್ರೋಶಗೊಂಡು ನೀಲಾಗೆ ಮಹೇಶ್ ಚಾಕು ಇರದಿದ್ದಾನೆ.

ಮಹೇಶ್ ನೀಲಾ ಹಡಪದಿಗೆ ಚಾಕು ಇರಿದು ಪರಾರಿ ಆಗಿದ್ದಾನೆ. ಕೂಡಲೇ ಪೊಲೀಸರು ಆರೋಪಿ ಮಹೇಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಗಾಯಾಳು ನೆಲಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಿವಕುಮಾರ್ ಭೇಟಿ ನೀಡಿದ್ದು,ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!