Ad imageAd image

ಗೌಡಿ ಕೆಲಸದವನ ಜೊತೆ ಯುವತಿ ಪರಾರಿ : ಕಿಡ್ನ್ಯಾಪ್ ಕೇಸ್ ದಾಖಲಿಸಿದ ಯುವತಿ ಕುಟುಂಬಸ್ಥರು

Bharath Vaibhav
ಗೌಡಿ ಕೆಲಸದವನ ಜೊತೆ ಯುವತಿ ಪರಾರಿ : ಕಿಡ್ನ್ಯಾಪ್ ಕೇಸ್ ದಾಖಲಿಸಿದ ಯುವತಿ ಕುಟುಂಬಸ್ಥರು
WhatsApp Group Join Now
Telegram Group Join Now

ಬೆಳಗಾವಿ : ನರ್ಸಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆಕೆಯೊಡನೆ ಸ್ನೇಹ ಹೊಂದಿದ್ದ ಸದ್ರುದ್ದೀನ್‌ ಭೇಪಾರಿ ಎಂಬ ಯುವಕನೇ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾನೆಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಸದ್ರುದ್ದೀನ್‌ ಭೇಪಾರಿ ಎಂಬ ಯುವಕ ಮತ್ತು ನರ್ಸಿಂಗ್‌ ಓದುತ್ತಿದ್ದ ಯುವತಿ ನಡುವೆ ಮೂರು ವರ್ಷಗಳಿಂದ ಪ್ರೇಮಸಂಬಂಧವಿತ್ತು.

ಆದರೆ ಇದಕ್ಕೆ ಮನೆಯವರು ಸಮ್ಮತಿಸಿರಲಿಲ್ಲ. ‌ಮನೆಯಲ್ಲಿ ಇವರ ಸಂಗತಿ ತಿಳಿದಿದ್ದೇ ಹುಡುಗಿ ತಾಯಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ಇದನ್ನು ಆಕ್ಷೇಪಿಸಿದ ಬಳಿಕ ಇವರಿಬ್ಬರೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಗಾರೆ ಕೆಲಸ ಮಾಡುತ್ತಿದ್ದ ಸದ್ರುದಿನ್ ಬೇಪಾರಿ ತನ್ನ ಮಗಳನ್ನು ಅಪಹರಿಸಿದ್ದಾನೆಂದು ಯುವತಿಯ ಕುಟುಂಬಸ್ಥರು ದೂರಿದ್ದಲ್ಲದೇ ,ಯುವಕನ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!