Ad imageAd image

ದರ್ಶನ್ ಹಣೆ ಬರಹದಲ್ಲಿ ಏನಿದು ಅದು ಆಗುತ್ತದೆ : ನಟ ಶಿವಣ್ಣ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಘಟನೆ ಕುರಿತಂತೆ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಚಿತ್ರರಂಗದ ಬೆಳವಣಿಗೆಗಳ ಬಗ್ಗೆ ನಟ ಶಿವರಾಜಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದ ಬೆಳವಣಿಗೆಗಳ ಬಗ್ಗೆ ನಟ ಶಿವರಾಜಕುಮಾರ್ ವಿಷಾದ ವ್ಯಕ್ತಪಡಿಸಿದ್ದು, ನಾವು ಮಾಡುತ್ತಿರುವುದು ಸರೀನಾ ಅಂತ ಯೋಚಿಸಬೇಕು.

ಇದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ ಘಟನೆಯಿಂದ ಎರಡು ಕುಟುಂಬಗಳಿಗೆ ನೋವಾಗಿದೆ. ದರ್ಶನ್ ಹಾಗೂ ರೇಣುಕಾ ಸ್ವಾಮಿ ಕುಟುಂಬಕ್ಕೆ ನೋವಾಗಿದೆ ಎಂದು ದರ್ಶನ್ ಕೆಸಿನ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬಹುಶಃ ಏನು ಮಾಡೋಕ್ಕೆ ಆಗಲ್ಲ. ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಕಾನೂನಿನ ಅಡಿಯಲ್ಲಿ ಏನಾಗಬೇಕು ಅದು ಆಗೇ ಆಗುತ್ತದೆ. ಆದರೆ ಈ ಒಂದು ಘಟನೆ ನಡೆಯಬಾರದಿತ್ತು ಇದರಿಂದ ನನಗೂ ತುಂಬಾ ಬೇಸರವಾಗಿದೆ.

ದರ್ಶನ್ ಕುಟುಂಬ ಆಗಿರಬಹುದು ರೇಣುಕಸ್ವಾಮಿ ಕುಟುಂಬ ಆಗಿರಬಹುದು ಹೀಗೆ ಆಗಬಾರದಿತ್ತು. ನೋಡೋಣ ಮುಂದೆ ಏನಾಗುತ್ತದೆ ಎಂದು ಈಗಾಗಲೇ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

 

WhatsApp Group Join Now
Telegram Group Join Now
Share This Article
error: Content is protected !!