Ad imageAd image

ಅಹಮದ್‌ನಗರ ಇನ್ಮುಂದೆ ಅಹಲ್ಯಾನಗರ : ಕೇಂದ್ರ ಸರ್ಕಾರ ಅನುಮೋದನೆ

Bharath Vaibhav
ಅಹಮದ್‌ನಗರ ಇನ್ಮುಂದೆ ಅಹಲ್ಯಾನಗರ : ಕೇಂದ್ರ ಸರ್ಕಾರ ಅನುಮೋದನೆ
WhatsApp Group Join Now
Telegram Group Join Now

ನವದೆಹಲಿ : ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಹೆಸರನ್ನು ಅಹಲ್ಯಾನಗರ ಎಂದು ಬದಲಾಯಿಸಲು ಮಹಾರಾಷ್ಟ್ರ ಸರ್ಕಾರದ ಸಂಪುಟದ ನಿರ್ಣಯಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಸ್ವಾಗತಿಸಿದ್ದು, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಬಣ್ಣಿಸಿದ್ದಾರೆ.

ಇದೇ ಮಾರ್ಚ್ 2024 ರಲ್ಲಿ, ಮಹಾರಾಷ್ಟ್ರ ಕ್ಯಾಬಿನೆಟ್ ಮರಾಠ-ಮಾಳವ ಸಾಮ್ರಾಜ್ಯದ 18 ನೇ ಶತಮಾನದ ರಾಣಿ ಪುಣ್ಯಶ್ಲೋಕ್ ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರನ್ನು ಜಿಲ್ಲೆಯ ಮರುನಾಮಕರಣವನ್ನು ಪ್ರಸ್ತಾಪಿಸಿತ್ತು.

ಇದಕ್ಕೆ ಕೇಂದ್ರ ಸಚಿವಾಲಯ ಅನುಮೋದನೆ ನೀಡಿದ್ದು,ಇನ್ಮುಂದೆ ಅಹಮದ್‌ನಗರ ಜಿಲ್ಲೆಯ ಹೆಸರನ್ನು ಅಹಲ್ಯಾನಗರ ಎಂದು ಮನುನಾಮಕರಣ ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!