Ad imageAd image

ಏರ ಇಂಡಿಯಾ ವಿಮಾನಯಾನ ಟೀಕೆ: ಈಗ ಡೆವಿಡ್ ವಾರ್ನರ್ ಸರದಿ

Bharath Vaibhav
ಏರ ಇಂಡಿಯಾ ವಿಮಾನಯಾನ ಟೀಕೆ: ಈಗ ಡೆವಿಡ್ ವಾರ್ನರ್ ಸರದಿ
WhatsApp Group Join Now
Telegram Group Join Now

ನವದೆಹಲಿಟಾಟಾ ಒಡೆತನದ ಏರ್​ ಇಂಡಿಯಾ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಮೇಲೆ ಪ್ರಯಾಣಿಕರಿಂದ ದಿನಕ್ಕೊಂದು ಆರೋಪ ಕೇಳಿ ಬರುತ್ತಿದೆ. ವಿಮಾನಗಳ ವಿಳಂಬ ಹಾರಾಟದಿಂದಾಗಿ ಸಂಸ್ಥೆಯ ಮೇಲೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಕೃಷಿ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​, ಎನ್​ಸಿಪಿ ನಾಯಕಿ (ಶರದ್​ ಪವಾರ್ ಬಣ) ಸುಪ್ರಿಯಾ ಸುಳೆ ಅವರು ವಿಮಾನ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್​ ವಾರ್ನರ್​ ಕೂಡ ಆಕ್ರೋಶ ಹೊರಹಾಕಿದ್ದಾರೆ.

ವಾರ್ನರ್ಅಸಮಾಧಾನವೇನು?: ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಡೇವಿಡ್​ ವಾರ್ನರ್​, “ನಾವು ಪೈಲಟ್‌ಗಳಿಲ್ಲದ ಏರ್​ ಇಂಡಿಯಾ ವಿಮಾನ ಹತ್ತಿದ್ದೇವೆ. ಗಂಟೆಗಟ್ಟಲೆ ಅದರಲ್ಲೇ ಕಾಯುವಂತಾಗಿದೆ. ಪೈಲಟ್‌ಗಳಿಲ್ಲದ ವಿಮಾನಕ್ಕೆ ಪ್ರಯಾಣಿಕರನ್ನು ಏಕೆ ಹತ್ತಿಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ, “ಬೆಂಗಳೂರಿನಲ್ಲಿ ಹವಾಮಾನ ಬದಲಾವಣೆಯಿಂದಾಗಿ ಎಲ್ಲಾ ಏರ್​​ಲೈನ್ಸ್​ ಸಂಸ್ಥೆಗಳ ವಿಮಾನಗಳ ಮಾರ್ಗ ಬದಲಾವಣೆ ಮತ್ತು ಕೆಲ ವಿಮಾನಗಳ ಹಾರಾಟ ವ್ಯತ್ಯಯವಾಗಿದೆ. ನಿಮ್ಮ ತಾಳ್ಮೆ ಮತ್ತು ಆಯ್ಕೆಗಾಗಿ ಧನ್ಯವಾದಗಳು” ಎಂದಿದೆ.

ಕೇಂದ್ರ ಸಚಿವರಿಗೆ ಮುರಿದ ಸೀಟು ನೀಡಿದ್ದ ಏರ್ಲೈನ್ಸ್​: ಕೇಂದ್ರ ಕೃಷಿ ಸಚಿವ ಶಿವರಾಜ್​ ಸಿಂಗ್​ ಚೌಹಾಣ್​ ಇತ್ತೀಚೆಗೆ ಏರ್​ ಇಂಡಿಯಾ ವಿಮಾನದಲ್ಲಿ ಭೋಪಾಲ್​ನಿಂದ ನವದೆಹಲಿಗೆ ಪ್ರಯಾಣಿಸಿದ್ದರು. ಅವರಿದ್ದ ಆಸನ ಮುರಿದಿದ್ದು ಎನ್ನಲಾಗಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವರು, ಪ್ರಯಾಣಿಕರಿಂದ ಪೂರ್ಣ ಟಿಕೆಟ್​ ದರ ಪಡೆಯುವ ವಿಮಾನಯಾನ ಸಂಸ್ಥೆ ಕಳಪೆ ದರ್ಜೆಯ ಸೌಲಭ್ಯ ನೀಡಿದೆ. ಹಣಕ್ಕೆ ತಕ್ಕ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಇದು ಪ್ರಯಾಣಿಕರಿಗೆ ಮಾಡುವ ಮೋಸ. ನನ್ನ ಪ್ರಯಾಣದ ವೇಳೆ ಸೀಟು ಮುರಿದಿತ್ತು ಎಂದು ತಮಗಾದ ಕಹಿ ಅನುಭವವನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಬೇಸರಿಸಿದ್ದ ಎನ್ಸಿಪಿ ನಾಯಕಿಎರಡು ದಿನಗಳ ಹಿಂದಷ್ಟೇ, ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ ವಿಮಾನ ತಡವಾದ ಹಾರಾಟಕ್ಕೆ ತೀವ್ರ ಬೇಸರಿಸಿದ್ದರು. ಸಂಸ್ಥೆ ಅಧಿಕ ಮೊತ್ತ ಪಾವತಿಸಿಕೊಂಡು, ಸರಿಯಾದ ಸಮಯಕ್ಕೆ ವಿಮಾನಗಳ ಹಾರಾಟ ನಡೆಸುತ್ತಿಲ್ಲ. ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!