Ad imageAd image

ಬೆಳಗಾವಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು: ಅಜಿತ್ ಪವಾರ್ ಖ್ಯಾತೆ

Bharath Vaibhav
ಬೆಳಗಾವಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು: ಅಜಿತ್ ಪವಾರ್ ಖ್ಯಾತೆ
WhatsApp Group Join Now
Telegram Group Join Now

ಮುಂಬೈ : ನವೆಂಬರ್ 1 ಬಂದ್ರೆ ಸಾಕು ಇತ್ತ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಜೋರಾಗಿರುತ್ತದೆ. ಅತ್ತ ಬೆಳಗಾವಿಯ ಗಡಿ ಭಾಗದಲ್ಲಿ MES ಪುಂಡರು ಸೇರಿದಂತೆ ಮರಾಠಿಗರು ಪ್ರತಿಭಟನೆ, ಕರಾಳ ದಿನ ಆಚರಣೆಗೆ ಮುಂದಾಗುತ್ತಾರೆ. ಇದೀಗ ಬೆಳಗಾವಿ ಮತ್ತು ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು, ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರ ಭಾಗವಾಗಿಲ್ಲ. ಮಹಾರಾಷ್ಟ್ರ ರಚನೆಯಾಗಿ 65 ವರ್ಷಗಳ ನಂತರವೂ, ಪಕ್ಕದ ಕರ್ನಾಟಕದ ಬೆಳಗಾವಿ ಮತ್ತು ಕಾರವಾರ ಇನ್ನೂ ಪಶ್ಚಿಮ ಮರಾಠಿ ಮಾತನಾಡುವ ರಾಜ್ಯದೊಂದಿಗೆ ವಿಲೀನಗೊಂಡಿಲ್ಲ ಎಂಬುದು ವಿಷಾದದ ಸಂಗತಿ ಎಂದಿದ್ದಾರೆ.

ಮಹಾರಾಷ್ಟ್ರವು ತನ್ನ ಅಸ್ತಿತ್ವಕ್ಕೆ 65 ವರ್ಷಗಳನ್ನು ಪೂರೈಸಿದ್ದರೂ, ನಮ್ಮ ಹೃದಯದಲ್ಲಿ ಒಂದು ವಿಷಾದವಿದೆ. ಇಂದಿಗೂ, ಬೆಳಗಾವಿ ಮತ್ತು ಕಾರವಾರದ ಮರಾಠಿ ಜನರು ನಮ್ಮೊಂದಿಗೆ ಇಲ್ಲ ಎಂದಿದ್ದಾರೆ. ಪ್ರಕರಣವು ಸುಪ್ರೀಂ ಕೋರ್ಟ್‌ ನಲ್ಲಿದೆ. ಅವರು ಮಹಾರಾಷ್ಟ್ರದೊಂದಿಗೆ ವಿಲೀನಗೊಂಡ ದಿನ, ಮಹಾರಾಷ್ಟ್ರ ಈಗ ಪೂರ್ಣಗೊಂಡಿದೆ ಎಂದು ನಾವು ವಿಶ್ವಾಸದಿಂದ ಹೇಳಬಹುದು ಎಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!