Ad imageAd image

ರಾಹುಲ್ ಗಾಂಧಿ ಹಿಂದೂ ವಿರೋಧಿ ಹೇಳಿಕೆಗೆ ಸರ್ವಧರ್ಮಿಯರ ಖಂಡನೆ 

Bharath Vaibhav
WhatsApp Group Join Now
Telegram Group Join Now

ನವದೆಹಲಿ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷಗಳ ಪ್ರತಿನಿಧಿಯಾಗಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಸೋಮವಾರ (ಜುಲೈ 1) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮೊಂದಿಗೆ ಭಗವಾನ್ ಶಿವ ಮತ್ತು ಸಿಖ್ ಗುರು ಶ್ರೀ ಗುರುನಾನಕ್ ದೇವ್ ಅವರ ಪೋಸ್ಟರ್ ಪ್ರದರ್ಶಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ “ವ್ಯವಸ್ಥಿತ ಮತ್ತು ಪೂರ್ಣ ಪ್ರಮಾಣದ ಆಕ್ರಮಣ” ನಡೆಸಿದರು.

ತಮ್ಮ ಭಾಷಣದಲ್ಲಿ ರಾಹುಲ್ ಅವರು ಶಿವನ ಅಭಯಮುದ್ರವನ್ನು ಉಲ್ಲೇಖಿಸುವ ಮೂಲಕ ವಾಗ್ಧಾಳಿ ನಡೆಸಿದರು. ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಸಿಖ್, ಇಸ್ಲಾಂ, ಹಿಂದೂ ಮುಖಂಡರು , ವಿವಿಧ ಸಾಧು ಸಂತರು ಕಿಡಿಕಾರಿದ್ದಾರೆ.

ಆಡಳಿತಾರೂಢ ಮೈತ್ರಿಕೂಟದ ನಾಯಕರು ಇದನ್ನು ಬಲವಾಗಿ ವಿರೋಧಿಸಿದರು. ಸುಮಾರು 1.42 ಗಂಟೆಗಳ ಕಾಲ ನಡೆದ ರಾಹುಲ್ ಅವರ ಭಾಷಣದ ಆಯ್ದ ಭಾಗಗಳಿಗೆ ಪ್ರಧಾನಿ ಮೋದಿ ಸ್ವತಃ ಪ್ರತಿಕ್ರಿಯಿಸಬೇಕಾಯಿತು.(ಅಡೆತಡೆಗಳು ಮತ್ತು ಮಧ್ಯಸ್ಥಿಕೆಗಳು ಸೇರಿದಂತೆ).

ತಮ್ಮ ಭಾಷಣದಲ್ಲಿ, ರಾಹುಲ್ ವಿವಿಧ ಧರ್ಮಗಳನ್ನು ಉಲ್ಲೇಖಿಸುವ ಮೂಲಕ ಬಿಜೆಪಿಯನ್ನು ಅಹಿಂಸೆಯಿಂದ ಎದುರಿಸುವ ಬಗ್ಗೆ ಮಾತನಾಡಿದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರ ವಿರೋಧವನ್ನು ಎದುರಿಸುತ್ತಿರುವ ರಾಹುಲ್ ಗಾಂಧಿಗೆ ಈಗ ಧರ್ಮಾಚಾರ್ಯರು ಓದಲು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!