Ad imageAd image

ಗುರುಮಠಕಲ್ ಶಿಕ್ಷಕರ ಚುನಾವಣಾ ನಿಯಮ ಉಲ್ಲಂಘನೆ ಆರೋಪ

Bharath Vaibhav
ಗುರುಮಠಕಲ್ ಶಿಕ್ಷಕರ ಚುನಾವಣಾ ನಿಯಮ ಉಲ್ಲಂಘನೆ ಆರೋಪ
WhatsApp Group Join Now
Telegram Group Join Now

ಶಿಕ್ಷಕರ ಚುನಾವಣೆಯಲ್ಲಿ ಅಧಿಕಾರಿಗಳ ನೇಮಕವಿಲ್ಲದೆ ಗೊಂದಲ

ಗುರುಮಠಕಲ್ : ತಾಲೂಕಿನ ಪ್ರಾಥಮಿಕ ಶಾಲೆ ಶಿಕ್ಷಕರ 2026ರ ಚುನಾವಣೆಗೆ ಸಂಬಂಧಿಸಿದಂತೆ ಗಂಭೀರ ಅನಿಯಮಗಳ ಆರೋಪ ಕೇಳಿಬರುತ್ತಿವೆ ಇಂದು (ಏಪ್ರಿಲ್ 12) ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದರೂ ಚುನಾವಣೆಯನ್ನು ಸುಗಮವಾಗಿ ನಡೆಸಲು ಅಗತ್ಯವಾದ ಯಾವುದೇ ಚುನಾವಣಾ ಅಧಿಕಾರಿಗಳನ್ನು ಇನ್ನೂ ನೇಮಕ ಮಾಡಲಾಗಿಲ್ಲ ಎಂಬುದು ಶಿಕ್ಷಕರ ವಲಯದಲ್ಲಿ ಆತಂಕ ಮೂಡಿಸಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 11ರಿಂದ ಪ್ರಾರಂಭವಾಗಿದ್ದು, ಏಪ್ರಿಲ್ 12ರಂದು ಕೊನೆಗೊಳ್ಳುತ್ತಿದೆ ಆದರೆ ಇಷ್ಟೊಂದು ಪ್ರಮುಖ ಪ್ರಕ್ರಿಯೆ ನಡೆಯುತ್ತಿರುವಾಗಲೇ ಯಾವುದೆ ಅಧಿಕೃತ ವ್ಯವಸ್ಥೆಗಳು ಕಾಣಿಸದಿರುವುದು ಶಿಕ್ಷಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ “ಚುನಾವಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು ಆದರೆ ಅಧಿಕಾರಿಗಳ ನೇಮಕವಿಲ್ಲದೆ ನಡೆಯುತ್ತಿರುವುದು ಗಂಭೀರ ವಿಷಯ,” ಎಂದು ಕೆಲವು ಶಿಕ್ಷಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಈ ಕುರಿತು ಶಿಕ್ಷಕರ ವಲಯದಲ್ಲಿ ಗುಸು ಗುಸು ಮಾತುಗಳು ಹೆಚ್ಚುತ್ತಿವೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಚುನಾವಣಾ ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಕರ ಒತ್ತಾಯವಾಗಿದೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!