Ad imageAd image
- Advertisement -  - Advertisement -  - Advertisement - 

ಚಿರತೆಯ ಭಯದಲ್ಲಿ ತಾಲೂಕಿನ ಜನ ಕ್ಕೆ ಹೊಲದ ಮನೆಯಲ್ಲಿ ಕಟ್ಟಿದ ನಾಯಿಯನ್ನ ಚಿರತೆಯೊಂದು ತಿಂದು ಹಾಕಿದ ಘಟನೆ

Bharath Vaibhav
ಚಿರತೆಯ ಭಯದಲ್ಲಿ ತಾಲೂಕಿನ ಜನ ಕ್ಕೆ ಹೊಲದ ಮನೆಯಲ್ಲಿ ಕಟ್ಟಿದ ನಾಯಿಯನ್ನ ಚಿರತೆಯೊಂದು ತಿಂದು ಹಾಕಿದ ಘಟನೆ
WhatsApp Group Join Now
Telegram Group Join Now

ಕಲಘಟಗಿ: -ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ರೈತರ ಹೊಲದ ಮನೆಯಲ್ಲಿ ಕಟ್ಟಿದ ನಾಯಿಯನ್ನ ಚಿರತೆಯೊಂದು ತಿಂದು ಹಾಕಿದ ಘಟನೆ ಗುರುವಾರ ರಾತ್ರಿ ಜರುಗಿದೆ.

ಗ್ರಾಮದ ಮಾದೇವಪ್ಪ ದೇಸಾಯಿ ಅವರು ಬೆಳಿಗ್ಗೆ ಹೊಲಕ್ಕೆ ತೆರಳಿ ನೋಡಿದಾಗ ಮನೆಯ ಹೊರಗೆ ಕಟ್ಟಿರುವ ನಾಯಿ ತಿಂದು ಹಾಕಿದ್ದು ಮನೆಯ ಸುತ್ತ ಮುತ್ತಲು ಹಾಗೂ ಜಮೀನಿನಲ್ಲಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಹಲವು ದಿನಗಳಿಂದ ತಾಲ್ಲೂಕಿನ ಸುತಗಟ್ಟಿ, ತಬಕದಹೊನ್ನಳ್ಳಿ ಹಾಗೂ ಮಲಕನಕೊಪ್ಪ ಗ್ರಾಮದ ಹೊರವಲಯದ ಗುಡ್ಡ ಗಾಡುಗಳಲ್ಲಿ ಚಿರತೆ ಕಂಡು ಬರುತ್ತಿರುವದರಿಂದ ರೈತರ ಜಮೀನಿಗೆ ತೆರಳಲು ಭಯ ಭಯ ಬೀತರಾಗಿದ್ದಾರೆ.

ಕಳೆದ 10 ದಿನಗಳಿಂದ ತಬಕದೊನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿರುವದು ಕಂಡು ಬಂದಿದೆ ನಮ್ಮ ಸಿಬ್ಬಂದಿಗಳು ಚಿರತೆ ಕಾಡಿನತ್ತ ಓಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದು ಈಗ ರೈತರ ಜಮೀನಿನಲ್ಲಿ ಗೋವಿನ ಜೋಳ ಕಬ್ಬು ಹಾಗೂ ಇನ್ನಿತರ ಬೆಳೆ ಇರುವದರಿಂದ ಚಿರತೆ ಯಾವ ಕಡೆ ಹೋಗುತ್ತದೆ ತಿಳಿಯುತ್ತಿಲ್ಲ ರೈತರು ಜಮೀನಿಗೆ ತೆರಳುವಾಗ ಎಚ್ಚರಿಕೆಯಿಂದ ಇರಬೇಕು ಚಿರತೆ ಹಾಗೂ ಹೆಜ್ಜೆಗಳು ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ತಿಳಿಸಿದರು.

ವರದಿ ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
Share This Article
error: Content is protected !!