Ad imageAd image

ಸ್ವಚ್ಛತೆ ಕಾಣದ ಅಂಗನವಾಡಿ… ಸಾಂಕ್ರಾಮಿಕ ರೋಗಕ್ಕೆ ಭಯಬಿತರಾದ ಪಾಲಕರು

Bharath Vaibhav
ಸ್ವಚ್ಛತೆ ಕಾಣದ ಅಂಗನವಾಡಿ… ಸಾಂಕ್ರಾಮಿಕ ರೋಗಕ್ಕೆ ಭಯಬಿತರಾದ ಪಾಲಕರು
WhatsApp Group Join Now
Telegram Group Join Now

ಅಥಣಿ:-ಚಿಕ್ಕವಯಸ್ಸಿನಲ್ಲಿ ಶೈಕ್ಷಣಿಕ ಅಡ್ಡಿಪಾಯಿ ವಾಗಬೇಕ್ಕಿದ್ದ ಅಂಗನವಾಡಿ ದುರಾದೃಷ್ಟ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಕಳಿಸಲು ಭಯಭೀತರಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮ ಪಂ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಸಂಖ್ಯೆ 1 ರಲ್ಲಿ ಹಲವು ವಷ೯ಗಳಿಂದ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ.

ಅಂಗನವಾಡಿ ತುಂಬೆಲ್ಲ ಕೆಟ್ಟ ವಾಸನೆ ಹರಡಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗ್ರಾಮದ ನೈರ್ಮಲ್ಯ ಹದಗೆಟ್ಟಿದ್ದು, ಸೂಕ್ತವಾದ ನಿರ್ವಹಣೆ ಇಲ್ಲದೆ ಈ ಅಂಗನವಾಡಿ ರೋಗಗಳ ತಾಣವಾಗಿದೆ. ಇದಷ್ಟೇ ಅಲ್ಲದೆ ಇದರಿಂದ ಕಸ ಕೊಳೆತು ನಾರುತ್ತಿದ್ದು, ಗಿಡಗಂಟಿಗಳು ಬೆಳೆದು ಸೊಳ್ಳೆಗಳೊಂದಿಗೆ ಹಾವು, ಹುಳ, ಇನ್ನಿತರ ಅಪಾಯಕಾರಿ ಜೀವಿಗಳ ಆಶ್ರಯ ತಾಣವಾಗಿ ಪರಿವರ್ತನೆಗೊಂಡಿದೆ.

ಸ್ವಚ್ಛತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛ ಭಾರತ ಅಭಿಯಾನದಿಂದ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಡೆಂಗ್ಯೂ, ಮಲೇರಿಯಾ ಸೇರಿದಂತೆ ಅನೇಕ ರೋಗಗಳು ಹರಡುತ್ತಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ರೇಖಾ ಸಾವಂತ್ ಸ್ವಂತ ಗ್ರಾಮ ಪಂಚಾಯತಿ ವಿರುದ್ಧವೇ ಆರೋಪಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಗ್ರಾಮ ಸಭೆಯಲ್ಲಿ ಮತ್ತು ಸಾಮಾನ್ಯ ಸಭೆಯಲ್ಲಿಯೂ ಕೂಡ ಹೇಳಿದದ್ರು ಇಲ್ಲಿವರೆಗೂ ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದು ಕಡೆ ಮಕ್ಕಳ ಪಾಲಕರು ರೋಗಗಳ ಭೀತಿಯಲ್ಲಿದ್ದಾರೆ. ಇದೆಲ್ಲಾ ಕಂಡುಬಂದಿರುವುದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 1 ರಲ್ಲಿ
ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ನೈರ್ಮಲ್ಯ ಹದಗೆಟ್ಟಿದ್ದು ಸೂಕ್ತವಾದ ನಿರ್ವಹಣೆ ಇಲ್ಲದೆ ರೋಗಗಳ ತಂಗುದಾಣವಾಗಿದೆ.

ಅಷ್ಟೇ ಅಲ್ಲದೆ ಗ್ರಾಮದಲ್ಲಿ ಪೂರ್ಣ ಚರಂಡಿ ಇಲ್ಲದೆ ಇರೋದರಿಂದ ಚರಂಡಿ ನೀರು ಮುಂದಕ್ಕೆ ಹೋಗುತ್ತಿಲ್ಲ ಆದರಿಂದ ಚರಂಡಿಯಲ್ಲಿ ಕಸ ಕೊಳಿತು ನಾರುತ್ತಿದೆ ಗಿಡಗಂಟಿಗಳು ಬೆಳೆದು ಸೊಳ್ಳೆಗಳೊಂದಿಗೆ ಹಾವು, ಹುಳ, ಇನ್ನಿತರ ಭಯಾನಕ ಜೀವಿಗಳ ಆಶ್ರಯ ತಣವಾಗಿ ಪರಿವರ್ತನೆಗೊಂಡಿದೆ.

ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛಭಾರತ ಅಭಿಯಾನ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಅನುಮಾನ ಈ ಅಂಗನವಾಡಿಯನ್ನು ನೋಡಿದರೆ ಗೋತ್ತಾಗುತ್ತೆ.

ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.ಬೈಟ್ :ರೇಖಾ ಸಾವಂತ್ ಗ್ರಾಂ ಪಂ ಸದಸ್ಯರು ಕೋಹಳ್ಳಿ

ವಿನಯಕುಮಾರ ಮುಧೋಳ್ ಸ್ಥಳೀಯರು,ಹೈಪ್ ನಂಬರ್

ಇಒ ಅಥಣಿ 9480854100,ರಾಜು ಬೇವನೂರ ಗ್ರಾಂ ಪಂ ಅಭಿವೃದ್ಧಿ ಅಧಿಕಾರಿಗಳು ಕೋಹಳ್ಳಿ 9902030192,ರೇಖಾ ಸಾವಂತ್ ಗ್ರಾಂ ಪಂ ಸದಸ್ಯರು 8722724517,ವಿನಾಯಕುಮಾರ್ ಮುಧೋಳ್ ಗ್ರಾಮಸ್ಥರು 7026479619

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!