ಬೀದರ್ ; ಆರ್.ಎಸ್.ಎಸ್ ಕೂಸು ಈ ದೇಶವನ್ನು ಆಳುತ್ತಿದ್ದು, ಇದನ್ನು ಸಂಪೂರ್ಣವಾಗಿ ನಿಶೇಧಿಸಬೇಕೆಂದು ಜನರ ಧ್ವನಿ ಸಂಘಟನೆ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಈ ದೇಶದ ಸುಪ್ರಿಮ್ ಕೋರ್ಟ್ ಸಿಜೆಐ ಮೇಲೆ ಶು ಎಸೆದ ವಕೀಲನನ್ನು ಬಂಧಿಸಿ ಬಿಡುಗಡೆ ಮಾಡುವ ಮೂಲಕ ಈ ದೇಶದಲ;ಲಿ ಉನ್ನತ ಸ್ಥಾನದಲ್ಲಿರುವ ದಲಿತರನ್ನು ನೋಡಲಿಕ್ಕೆ ಆಗದ ಸ್ಥಿತಿ ನಿರ್ಮಾಣವಾಗಿದೆ. ಇದು ಈ ದೇಶವನ್ನಾಳುತ್ತಿರುವ ಆರ್.ಎಸ್.ಎಸ್ ಕೂಸು ಪ್ರಧಾನಿ ಮೋದಿಯವರ ಅಧಿಕಾರದಲ್ಲಿ ನಡೆಯುತ್ತಿದೆ ಅಂದರೆ ಸಾಮಾನ್ಯ ದಲಿತನ ಪಾಡೇನು? ಎಂದು ಪ್ರಶ್ನಿಸಿದರು.
ಇತ್ತಿಚೀಗೆ ಸೋಲಾಪುರ ಮೂಲದ ವ್ಯಕ್ತಿ ದಾನಪ್ಪ ಎನ್ನುವವರು ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ ಖಾತೆ ಸಚಿವರು ಹಾಗೂ ಈ ನಾಡಿನ ಓರ್ವ ದಲಿತ ಮುಖಂಡರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಅವಾಚ್ಛ ಪದ ಬಳಿಕೆ ಮಾಡಿ ಬೆದರಿಕೆ ಹಾಕಿದ್ದನ್ನು ಜನರ ಧ್ವನಿ ಸಂಘಟನೆ ತಿವೃವಾಗಿ ಖಂಡಿಸುತ್ತದೆ ಎಂದರು.
ವರದಿ: ಸಂತೋಷ ಬಿ.ಜಿ. ಪಾಟೀಲ




