Ad imageAd image

ಶಿವರಾತ್ರಿ ಅಮವಾಸ್ಯೆ ನಿಮಿತ್ತ ಅನ್ನದಾಸೋಹ ಕಾರ್ಯಕ್ರಮ

Bharath Vaibhav
ಶಿವರಾತ್ರಿ ಅಮವಾಸ್ಯೆ ನಿಮಿತ್ತ ಅನ್ನದಾಸೋಹ ಕಾರ್ಯಕ್ರಮ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ 16ನೇ ವಾರ್ಡಿನಲ್ಲಿರುವ ಶ್ರೀ ಉರುಕುಂದಿ ಈರಣ್ಣ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಅಮವಾಸ್ಯೆ ನಿಮಿತ್ತ ಜೀವನಿಧಿ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಅವರ ಕುಟುಂಬದಿಂದ ಅನ್ನ ದಾಸೋಹ ನೆರವೇರಿತು.

ಅಮವಾಸ್ಯೆ ನಿಮಿತ್ತ ದೇವಸ್ಥಾನದಲ್ಲಿ ಪಂಚಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಮಹಾಮಂಗಳಾರತಿ, ಹಾಗೂ ಪಲ್ಲಕ್ಕಿ ಸೇವೆ ಜರುಗಿದ್ದು ಹಲವಾರು ಭಕ್ತರು ಭಾಗಿಯಾಗಿ ದೇವರ ಹರಕೆ ತೀರಿಸಿದರು.

ದಾಸೋಹ ದಾನಿಗಳಾದ ಲೋಕೇಶ್ ಅವರು ಮಾತನಾಡಿ ಪ್ರತಿ ಅಮವಾಸ್ಯೆಯು ಇಲ್ಲಿ ದಾನಿಗಳ ನೆರವಿನಿಂದ ಅನ್ನದಾಸೋಹ ಜರುಗುತ್ತದೆ.

ಈ ಸ್ವಾಮಿಯ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಒಳಿತಾಗಿದ್ದು, ಇಂದು ನಮ್ಮ ಕುಟುಂಬ ಸಮೇತ ಬಂದು ಪಲ್ಲಕ್ಕಿ ಸೇವೆ, ದಾಸೋಹ ಸೇವೆ ಮಾಡಿರುವುದಾಗಿ ತಿಳಿಸಿದರು.

ರಂಗನಾಥ ಶೆಟ್ಟಿ ಅವರು ಮಾತನಾಡಿ ಅಪಾರ ಭಕ್ತವೃಂದವನ್ನು ಹೊಂದಿರುವ ಶ್ರೀ ಈರಣ್ಣ ಸ್ವಾಮಿಯ ಸೇವೆಗೈಯಲೆಂದು ನಗರದ ವಿವಿಧ ವಾರ್ಡ್ ಗಳಿಂದ ಬಂದು ತಮ್ಮ ಕೈಲಾದ ಸೇವೆಯಲ್ಲಿ ಭಾಗಿಯಾಗುತ್ತಾರೆಂದರು.

ಯಾರಾದರೂ ಮುಂದಿನ ಅಮವಾಸ್ಯೆಗೆ ದಾಸೋಹ ಮಾಡುವ ಇಚ್ಚೆಯುಳ್ಳ ಭಕ್ತರು ಮೊದಲೇ ತಿಳಿಸಿದಲ್ಲಿ ಅವರ ಸೇವೆಗೆ ಅನುವು ಮಾಡಿಕೊಡಲಾಗುವುದೆಂದು ಆರ್ಚಕ ಶರಣಯ್ಯಸ್ವಾಮಿ ತಿಳಿಸಿದರು.

ಇದೇ ವೇಳೆ ಧರ್ಮಕರ್ತರಾದ ಎಮ್.ಸೋಮಶೇಖರರೆಡ್ಡಿ, ಟ್ರಸ್ಟ್ ಅಧ್ಯಕ್ಷ ಬಿ.ಸುರೇಶರೆಡ್ಡಿ, ಸೇವಾಕರ್ತರಾದ ಬಿ.ವೀರೇಶ, ಪ್ರಕಾಶ, ಮುಖಂಡರಾದ ನಾಗಯ್ಯಸ್ವಾಮಿ, ಯಂಕೋಬ ಹಾಗೂ ಇನ್ನಿತರ ಭಕ್ತರು ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!