ಬೈಲಹೊಂಗಲ: ಹೌದು ಬೆಳಗಾವಿ ಜಿಲ್ಲೆಯಲ್ಲಿ Dcc ಬ್ಯಾಂಕ್ ಚುನಾವಣೆ ಕಾವು ತುಂಬಾ ರಂಗೇರಿದ್ದು, ಬರುವ ಆಕ್ಟೊಬರ್ 19 ರಂದು ಚುನಾವಣೆ ನಡೆಯಲಿದ್ದು ಬೈಲಹೊಂಗಲ ಹಾಗೂ ಕಿತ್ತೂರಿನಲ್ಲಿ ಚುನಾವಣೆ ಕಾವು ತುಂಬಾನೇ ಜೋರಾಗಿದೆ.

ಇಂತಹ ಸಂದರ್ಭದಲ್ಲಿ Dcc ಬ್ಯಾಂಕ್ ಚುನಾವಣೆಯ ಅಭ್ಯರ್ಥಿಗಳಾಗಿರುವ ಮಹಾಂತೇಶ್ ದೊಡ್ಡಗೌಡರು ಹಾಗೂ ವಿಕ್ರಂ ಇನಾಂದಾರ್ ರವರ ಪರ ಮಾತನಾಡಿದ ಬೈಲಹೊಂಗಲ ಕ್ಷೇತ್ರದ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗೂ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕರು ಆದ ಜಗದೀಶ್ ಮೆಟಗುಡ್ಡ ರವರು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿ Dcc ಬ್ಯಾಂಕ್ ಸಬಲೀಕರಣ ಹಾಗೂ ರೈತರ ಏಳಿಗೆಗಾಗಿ ಬೈಲಹೊಂಗಲದಿಂದ ಮಹಾಂತೇಶ್ ದೊಡ್ಡಗೌಡರು ಹಾಗೂ ಕಿತ್ತೂರಿನಿಂದ ವಿಕ್ರಂ ಇನಾಂದಾರ್ ರವರನ್ನು Dcc ಬ್ಯಾಂಕ್ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ವರದಿ: ಬಸವರಾಜು




