ಚಿಕ್ಕೋಡಿ :-ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಒಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ತಲುಪಿಸಲು ಮತ್ತು ಸುಪ್ರೀಂ ಕೋರ್ಟ್ ತೀರ್ಪುವನ್ನು ಅನುಷ್ಠಾನ ಗೊಳಿಸುವ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು,
ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಿಕ್ಕೋಡಿ ಜಿಲ್ಲಾ ಸಂಚಾಲಕರಾದ ಶ್ರೀ ಸುಭಾಷ ಸನದಿ ಅವರ ನೇತೃತ್ವದಲ್ಲಿ ಚಿಕ್ಕೋಡಿ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತೂಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಬೃಹತ್ ತಮ್ಟೆ ಚಳುವಳಿಯ ಉಪಯೋಗ ಅಧಿಕಾರಿಗಳಾದ ಶ್ರೀ ಸುಭಾಷ್ ಸಂಪಗಾವಿ ಹಾಗೂ ದಂಡಾಅಧಿಕಾರಿಗಳಾದ ಶ್ರೀ ಕುಲಕರ್ಣಿ ಚಿಕ್ಕೋಡಿ ಇವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ಬಾಬಾಸಾಹೇಬ ಕೆಂಚನ್ನವರ 30 ಗಳ ಹೋರಾಟದ ಪ್ರತಿಫಲವಾಗಿ ಸುಪ್ರೀಂಕೋರ್ಟ್ ಆಗಸ್ಟ್ 1ರಂದು ಒಳಮಿಸಲಾತಿಯ ಬಗ್ಗೆ ತೀರ್ಪನ್ನು ನಿಡಿದರು ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಮೇನಾ ಮೇಷವಾಗಿ ತಡೆಯನ್ನು ಮಾಡುತ್ತಿದ್ದಾರೆ ತಕ್ಷಣ ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಜಾರಿ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯ ಮೂಲಕ ವಿನಂತಿಸುತ್ತೇವೆ ಎನಾದರೂ ಒಳಮೀಸಲಾತಿ ಅನುಷ್ಠಾನಕ್ಕೆ ತರಲಿಲ್ಲ ಎಂದರೆ ಮುಂದಿನ ದಿನಮಾನದಲ್ಲಿ ನಮ್ಮ ಸಂಘಟನೆಗಳ ಒಕ್ಕೂಟಗಳಿಂದ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನಿಡಿದರು.
ಈ ಸಂದರ್ಭದಲ್ಲಿ ಸುಭಾಷ ಸನದಿ ಚಿಕ್ಕೋಡಿ ಜಿಲ್ಲಾ ಸಂಚಾಲಕರು ಸುಭಾಷ ಯರನಾಳೆ ನ್ಯಾಯವಾದಿಗಳು ಚಿಕ್ಕೋಡಿ ಬಾಬಾಸಾಹೇಬ ಕೆಂಚನ್ನವರ ಜಯಪಾಲ ಐಹೊಳೆ ಲಕ್ಷ್ಮಣ ಮಾನೆ ನಿಪ್ಪಾಣಿ ತಾಲ್ಲೂಕು ಸಂಚಾಲಕರು ಜಾನಬಾ ಖೋತ ಚಿಕ್ಕೋಡಿ ತಾಲೂಕು ಸಂಚಾಲಕರು ರುತಿಕ ಗಸ್ತಿ ಕಾಗವಾಡ ತಾಲೂಕು ಸಂಚಾಲಕರು ದುಂಡಾಪ್ಪ ತಳವಾರ ಸುನಿಲ್ ಹೋಸಮನಿ ಮಾರುತಿ ಕಾಮಗೌಡ ಸಾಹಿಲ್ ನಾಲಬಂದ ಸಂಘಟನೆಯ ಕಾರ್ಯಕರ್ತರು ಹಾಗೂ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ:- ರಾಜು ಮುಂಡೆ