ಸಿಂಧನೂರು : ಕೇಂದ್ರ ಸರ್ಕಾರದ ದುಡಿಯುವ ವರ್ಗದ ಕಡು ವಿರೋಧಿ 4 ಕರಾಳ ಕಾರ್ಮಿಕ ಸಂಹಿತೆ (ಲೇಬರ್ ಕೋಡ್ ಗಳ) ವಿರುದ್ಧ ಮತ್ತು ದುಡಿಯುವ ಜನರು ಸೇರಿದಂತೆ ಎಲ್ಲಾ ಜನರ ಹಕ್ಕುಗಳು ಮತ್ತು ಬದುಕಿನ ಮೇಲೆ ನಡೆಯುತ್ತಿರುವ ಅತ್ಯಂತ ನಿರ್ದಯವಾದ ದಾಳಿಯ ವಿರುದ್ಧ ಫೆಬ್ರುವರಿ 12 2026ರಂದು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳು ಹಾಗೂ ಇತರ ಸ್ವಾತಂತ್ರ್ಯ ವಲಯಗಳ ನೌಕರರ ಒಕ್ಕೂಟಗಳು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿ ನಗರದ ಪೋಸ್ಟ್ ಆಫೀಸ್ ಮುತ್ತಿಗೆ ಯತ್ನದಲ್ಲಿ 25ಕ್ಕೂ ಹೆಚ್ಚು ಪ್ರತಿಭಟನೆಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ಯಲಾಯಿತು.
ಈ ವೇಳೆ ಪ್ರತಿಭಟನಾಕಾರರಾದ ನಾಗರಾಜ ಪೂಜಾರಿ. ಬಸವಂತರಾಯ ಗೌಡ. ಎಂ.ಗಂಗಾಧರ.ಬಿ ಎನ್. ಯಾರದಿಹಾಳ. ರಮೇಶ್ ಪಾಟೀಲ್ ಬೇರ್ಗಿ. ಅಶೋಕ ನಂಜಲದಿನ್ನಿ. ಅಮೀನ್ ಪಾಷಾ ದಿದ್ದಿಗಿ. ಚಿಟ್ಟಿಬಾಬು. ಪರಶುರಾಮ್ ಬಂಡಾರಿ. ಆರ್ಎಚ್. ಕಲ್ಮಂಗಿ. ಸೇರಿದಂತೆ 500ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




