Ad imageAd image
- Advertisement -  - Advertisement -  - Advertisement - 

ಬೆಳಗಾವಿ ನಗರ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಮತ್ತು ಸರಗಳ್ಳತನ ಪ್ರಕರಣದಲ್ಲಿ ಆರೋಪಿತರ ಬಂಧನ

Bharath Vaibhav
ಬೆಳಗಾವಿ ನಗರ ಉದ್ಯಮಬಾಗ  ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಮತ್ತು ಸರಗಳ್ಳತನ  ಪ್ರಕರಣದಲ್ಲಿ ಆರೋಪಿತರ ಬಂಧನ
WhatsApp Group Join Now
Telegram Group Join Now

ಬೆಳಗಾವಿ:  ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಹಾಗು ಸರಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಶ್ರೀ ಯಡಾ ಮಾರ್ಟಿನ್ ಮಾರ್ಬನ್ಯಾ ಗ್ ಬೆಳಗಾವಿ ನಗರ, ಸ್ನೇಹ ಪಿ ವಿ ಉಪ-ಪೊಲೀಸ್ ಆಯುಕ್ತರು (ಅ&ಸಂ) ಬೆಳಗಾವಿ ನಗರ, ಮತ್ತು ಹೆಚ್ ಶೇಖರಪ್ಪ ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ್ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಉದ್ಯಮಬಾಗ್ ಪೊಲೀಸ್ ಠಾಣೆಯ ಇನ್ಸಪೆಕ್ಟರ ಶ್ರೀ ಡಿ. ಕೆ ಪಾಟೀಲ್ ಮತ್ತು ಪಿ. ಎಸ್ ಐ ಶ್ರೀ ಕಿರಣ ಸಿ ಹೊನಕಟ್ಟಿ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ಮನೆಕಳ್ಳತನ ಆರೋಪಿತನಾದ ರಫೀಕ್ ಮಹಮ್ಮದ್ ಶೇಖ ಸಾ!! ಮಹಾರಾಷ್ಟ್ರ ಹಾಗೂ ಸರಗಳ್ಳತನ ಆರೋಪಿತನಾದ ಪ್ರಜ್ವಲ್ ಖಾನಜೆ ಸಾ!! ದಾಮನೆ ಬೆಳಗಾವಿ ಇವರಿಗೆ ಉದ್ಯಮಭಾಗ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 1)49/2023 ಕಲಂ 454, 457,380 ಐ. ಪಿ. ಸಿ 2)04/2024 ಕಲಂ 454,457,380 ಐ. ಪಿ. ಸಿ 3)41/2022 ಕಲಂ 392 ಐ. ಪಿ ಸಿ 4) 57/2022 ಕಲಂ 392 ಐ. ಪಿ ಸಿ 5) 70/2023 ಕಲಂ 392 ಐ ಪಿ. ಸಿ ಹೀಗೆ ಒಟ್ಟು 05 ಪ್ರಕರಣಗಳಲ್ಲಿ ಆರೋಪಿತರನ್ನು ದಸ್ತಗಿರಿ ಮಾಡಿ ಈವರಿಂದ ಉದ್ಯಮಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಸರಗಳ್ಳತನ ಮಾಡಿದ 10,76,900/- ರೂಪಾಯಿ ಕಿಮ್ಮತ್ತಿನ 148 ತೂಕದ ಬಂಗಾರದ ಆಭರಣಗಳನ್ನು ಹಾಗೂ 3,800/- ರೂಪಾಯಿ ಕಿಮ್ಮತ್ತಿನ 40 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ದಿನಾಂಕ್ 10/07/2024 ಮತ್ತು 12/07/2024 ರಂದು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.

ಸದರಿ ತನಿಖಾತಂಡದಲ್ಲಿ ಉದ್ಯಮಬಾಗ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವರಾದ ಶ್ರೀ ಡಿ . ಕೆ ಪಾಟೀಲ, ಪಿ.ಎಸ್.ಐ ಶ್ರೀ ಕಿರಣ ಸಿ ಹೊನಕಟ್ಟಿ , ಪಿ.ಎಸ್.ಐ ಶ್ರೀಮತಿ ಆರ್.ಪಿ.ಕದಮ , ಸಿ ಎಚ್ ಸಿ ಟಿ. ಬಿ ಕುಂಚನೂರ್, ಸಿಪಿಸಿಗಳಾದ ಭರಮಣ್ಣ ಕರೆಗಾರ್, ಜಗದೀಶ್ ಹಾದಿಮನಿ, ಈರಣ್ಣ ಚವಲಗಿ, ಶಿವಕುಮಾರ್ ಕರ್ಕಿ,ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಮಹದೇವ್ ಕಾಶಿದ್ ರವರ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.

ವರದಿ ಮಹಾಂತೇಶ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
Share This Article
error: Content is protected !!