ಮುದಗಲ್ಲ:
ಸ್ಯಾಂಡಲ್ವುಡ್ನಲ್ಲಿ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ನಮ್ಮ ಹೆಮ್ಮೆಯ ರಾಯರ ಊರು ರಾಯಚೂರು ಭಾಗದ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಅಸುರರು’ ಎಂಬ ಸಿನಿಮಾ ನಿರ್ಮಿಸಿದ್ದು ಈ ಚಿತ್ರದ ಟೀಸರ್ ಗಮನ ಸೆಳೆಯುತ್ತಿದೆ.
ಈ ಪ್ರಾಮಿಸಿಂಗ್ ಟೀಸರ್, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
ಚಿತ್ರದ ಬಹುತೇಕ ಚಿತ್ರೀಕರಣ ರಾಯಚೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆದಿದೆ. ಚಿತ್ರದಲ್ಲಿ ಕನ್ನಡವನ್ನು ಬಳಸಲಾಗಿದೆ.
ಸಿನಿಮಾ ‘ಅಸುರರು ‘. ಈ ಚಿತ್ರವನ್ನು ರಾಜ ಬಹದ್ದೂರ್ ಫಿಲಂ ಪ್ಯಾಕ್ಟರಿ ನಿರ್ದೇಶಿಸಿದ್ದಾರೆ. ಸಿನಿಮಾ, ಸಂಪೂರ್ಣ ಹೊಸಬರು ರಾಯಚೂರು ನ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದೆ.
ಸಿನಿಮಾ, ಸಂಪೂರ್ಣ ಹೊಸ ಪ್ರತಿಭೆಗಳಿಂದ, ಹೊಸತನದಿಂದ ಕೂಡಿದೆ.ರಾಯ ರಾಹುಲ್ ಗಾಯಕ್ವಾಡ್, ತಮ್ಮಣ್ಣ T.K,ತಿಪ್ಪಣ್ಣ TS ಹಾಗೂ ನಟಿಯಾಗಿ ಸುಪ್ರೀತ್ ರಾಜ್ ಹಾಗೂ ಮಲ್ಲಿಕಾರ್ಜುನ ಮಿಮಿಕ್ರಿ ಅವರು ಅಸುರರು ‘ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ರಾಜ ಬಹದ್ದೂರ್ ಬರೆದಿದ್ದು.
ಶಾಮಣ್ಣ ಕಾಖಾಪೂರ, ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಸುರರು ನವಂಬರ್ 08 ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಸಾಕಷ್ಟು ತಯಾರಾಗಿವೆ. ‘ಅಸುರರು’ ಸಿನಿಮಾ ಸಿನಿಪ್ರಿಯರನ್ನು ಯಾವ ರೀತಿ ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕು.
ವರದಿ: ಮಂಜುನಾಥ ಕುಂಬಾರ