ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಹೋಸಪೇಟ, ಗ್ರಾಮದಲ್ಲಿ ಶಾಸಕರು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಬಸನಗೌಡ ದದ್ದಲ್ ರವರಿಗೆ ಜೆಸಿಬಿ ಯಿಂದ ಹಾರ ಹಾಕುವ ಮೂಲಕ ಅದ್ದೂರಿ ಸ್ವಾಗತ
ರಾಯಚೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ಗ್ರಾಮದಲ್ಲಿ ಇಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ರವರನ್ನು ಜೆಸಿಬಿ ಮೂಲಕ ಹಾರಾಕುವದರಿಂದ ಅದ್ದೂರಿ ಸ್ವಾಗತವನ್ನು ಕೋರಿದರು ಕಲ್ಯಾಣಪಥ ಯೊಜನಡಿಯಲ್ಲಿ ಹೋಸಪೇಟೆ ದಿಂದ ಚಿಕ್ಕಸೂಗುರ ಗ್ರಾಮದವರೆಗೆ BT ರಸ್ತೆ ಕಾಮಗಾರಿ,
ಹಾಗೂ KKRDB ಮೈಕ್ರೋ ಯೋಜನೆಯಡಿ ಹೋಸಪೇಟೆ ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆಗೆ 4 ಕೊಠಡಿಗಳ ನಿರ್ಮಾಣ ಕಾಮಗಾರಿ ಭೂಮಿ ಪೂಜೆ.ಮಾಡಿದರು ಮತ್ತು ಬಿಸಿ ಊಟದ ಕೋಣೆಯನ್ನು ಅಭಿವೃದ್ಧಿ ಮಾಡಬೇಕೆಂದು ತಿಳಿಸಿದರು ಮತ್ತು ಈ ಸಾಲಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ರವರಿಗೆ ತಿಳಿಸಿದರು.
ಈಗಾಗಲೇ ತಾವು ಶಾಲೆಯ ಮಕ್ಕಳು ಈ ಗ್ರಾಮದ ಸಾಕಷ್ಟು ಜನ ಡಾಕ್ಟರ್ ಗಳು ಮತ್ತು ಸರಕಾರಿ ನೌಕರರ ಹುದ್ದೆಗಳಲ್ಲಿ ಈ ಗ್ರಾಮದವರಾಗಿರುತ್ತಾರೆ ಹಾಗಾಗಿ ತ್ತಾವೆಲ್ಲ ಶಾಲೆಯ ಮಕ್ಕಳು ಒಳ್ಳೆ ವಿದ್ಯಾಭ್ಯಾಸವನ್ನು ಪಡೆದು ಈ ಗ್ರಾಮಕ್ಕೆ ಒಳ್ಳೆಯ ಕೀರ್ತಿಯನ್ನು ತರಬೇಕೆಂದು ಶಾಲಾ ಮಕ್ಕಳಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಸದಸ್ಯರುಗಳು,ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಗಾರಲದಿನ್ನಿ ವೀರನ ಗೌಡ