Ad imageAd image

ಸ್ತ್ರೀಕುಲಕ್ಕೆ ಸಮಾನತೆ ಕಲ್ಪಿಸಿದ ಬಸವಣ್ಣ: ಪಟ್ಟದ್ದೇವರು 

Bharath Vaibhav
ಸ್ತ್ರೀಕುಲಕ್ಕೆ ಸಮಾನತೆ ಕಲ್ಪಿಸಿದ ಬಸವಣ್ಣ: ಪಟ್ಟದ್ದೇವರು 
WhatsApp Group Join Now
Telegram Group Join Now

ಬಸವ ಜಯಂತಿ ಉತ್ಸವ ಕಾರ್ಯಕ್ರಮ 
ಭಾಲ್ಕಿ: 12ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳಾ ಕುಲಕ್ಕೆ ಸಮಾನತೆ ತತ್ವ ಪ್ರತಿಪಾದಿಸಿ ಸರ್ವರು ಸಮಾನರು ಎಂಬ ಸಂದೇಶ ಸಾರಿದ್ದರು ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ತುಳಿತಕ್ಕೊಳಗಾದವರನ್ನು ಮೇಲೆತ್ತುವ ಕೆಲಸ ಬಸವಣ್ಣನವರು ಮಾಡಿದ್ದರು. ಅಂತರ್ಜಾತಿ ವಿವಾಹ ಮಾಡಿಸಿ ಸಮಾನತೆ ಸಾರಿದ್ದರು. ಸಂವಿಧಾನದ ಆಶಯ ವಚನ ಸಾಹಿತ್ಯದಲ್ಲಿ ಅಡಗಿದೆ ಎಲ್ಲರೂ ವಚನ ಸಾಹಿತ್ಯವನ್ನು ಪಾಲಿಸಬೇಕು ಎಂದು ತಿಳಿಸಿದರು.


ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಕಾರ್ಯಕ್ರಮ ಉದ್ಘಾಟಿಸಿದರು. ಬೀದರ್ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸುವರ್ಣಾ ಅಮೃತರಾವ ಚಿಮಕೋಡೆ ಅನುಭಾವ ನೀಡಿದರು.
ಕಸಾಪ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್ ಪಾಟೀಲ್ ಬಸವ ಗುರುವಿನ ಪೂಜೆ ನೆರವೇರಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಸ್ವರೂಪಾ ಬಂಡೆಪ್ಪ ಸೇರಿದಂತೆ ಹಲವರು ಇದ್ದರು.
ಮಲ್ಲಮ್ಮ ನಾಗನಕೇರೆ ವಚನ ಪಠಿಸಿದರು. ಆರತಿ ಪಾತ್ರೆ ನಿರೂಪಿಸಿ, ವಂದಿಸಿದರು.

ವರದಿ: ಸಂತೋಷ ಬಿ ಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!