Ad imageAd image

ಸು. 80ಕೋಟಿ ರೂ. ತೆರಿಗೆ ಕಟ್ಟದೆ ನಿರ್ಲಕ್ಷ್ಯ ಮಾಡುತ್ತಿರುವ ವಾಸವದತ್ತ ಸಿಮೆಂಟ್ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೀಮಾಶಂಕರ ಕೊರವಿ ಆಗ್ರಹ.

Bharath Vaibhav
ಸು. 80ಕೋಟಿ ರೂ. ತೆರಿಗೆ ಕಟ್ಟದೆ ನಿರ್ಲಕ್ಷ್ಯ ಮಾಡುತ್ತಿರುವ ವಾಸವದತ್ತ ಸಿಮೆಂಟ್ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೀಮಾಶಂಕರ ಕೊರವಿ ಆಗ್ರಹ.
WhatsApp Group Join Now
Telegram Group Join Now

ಸೇಡಂ:- ನಗರಕ್ಕೆ ಹೊಂದಿಕೊಂಡಿರುವ ಬೃಹತ್ ವಾಸವದತ್ತಾ ಸಿಮೆಂಟ್ ಕಾರ್ಖಾನೆಯವರು ಪುರಸಭೆ ಸೇಡಂರವರಿಗೆ ಸುಮಾರು ೭೦ ರಿಂದ ೮೦ ಕೋಟಿ ರೂಪಾಯಿ ತೆರಿಗೆ ಬಾಕಿ ಇದ್ದು ಅದನ್ನು ಇಲ್ಲಿಯವರೆಗೆ ಕಟ್ಟಿರುವುದಿಲ್ಲ. ಇದರ ಬಗ್ಗೆ ಪುರಸಭೆ ಅಧಿಕಾರಿಗಳು ಕೂಡ ಇತ್ತ ಕಡೆ ಗಮನ ಕೊಡುತ್ತಿಲ್ಲ.

ಇದರಿಂದ ಪುರಸಭೆ ಅಧಿಕಾರಿಗಳು ಕೂಡ ಶಾಮಿಲ್ ಆಗಿದ್ದಾರೆ ಎಂಬ ಅನುಮಾನ ಕೂಡ ಮೂಡಿ ಬರುತ್ತಿದೆ. ಅದ ಕಾರಣ ವಾಸವದತ್ತಾ ಕಂಪನಿ ವಿರುದ್ಧ ಮತ್ತು ಪುರಸಭೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕ ಅಧ್ಯಕ್ಷರಾದ ಭೀಮಾಶಂಕರ ಕೊರವಿ ಅವರು ದಿನಾಂಕ ೨೯/೦೧/೨೦೨೫ ರಂದು ಸೇಡಂ ತಹಶೀಲ್ದಾರರ ಕಚೇರಿಗೆ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!