Ad imageAd image

ಪ್ರಧಾನಿ ಮುಂದೆ ನಿಲ್ಲಲು ಬಿಜೆಪಿ ಸಂಸದರು  ನಡುಗುತ್ತಾರೆ: ಸಚಿವ ರಾಮಲಿಂಗರಡ್ಡಿ 

Bharath Vaibhav
ಪ್ರಧಾನಿ ಮುಂದೆ ನಿಲ್ಲಲು ಬಿಜೆಪಿ ಸಂಸದರು  ನಡುಗುತ್ತಾರೆ: ಸಚಿವ ರಾಮಲಿಂಗರಡ್ಡಿ 
WhatsApp Group Join Now
Telegram Group Join Now

ಯಾದಗಿರಿ: ರಾಜ್ಯದ ಬಿಜೆಪಿ ಸಂಸದರು ಪಿಎಂ ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ಮಾತಾಡಲು ಗಡ ಗಡ ನಡಗುತ್ತಾರೆ. ಇಂತಹವರು ರಾಜ್ಯದ ಅಭಿವೃದ್ಧಿ ಬಗ್ಗೆ, ಏನು ಮಾತಾಡುತ್ತಾರೆಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ವ್ಯಂಗ್ಯವಾಡಿದರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಾಧ್ವಾರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವೇ ಪೆಟ್ರೋಲ್‌ ಲ, ಗ್ಯಾಸ್‌ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಸಿದೆ, ಮೊದಲು ಆ ಸರ್ಕಾರದ ವಿರುದ್ಧ ಹೋರಾಟ ಮಾಡಲಿ, ಅದು ಬಿಟ್ಟು ಇಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವ ಯಾವುದೇ ನೈತಿಕತೆ ಇಲ್ಲ ರಾಜ್ಯ ಬಿಜೆಪಿ ನಾಯಕರಿಗಿಲ್ಲ ಎಂದರು.ರಾಜ್ಯದಲ್ಲಿರುವ ಬಿಜೆಪಿಯವರು ಈಗ ಖಾಲಿ ಇದ್ದಾರೆ. ಹಾಗಾಗಿ ಹೋರಾಟ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಸಿಎಂ, ಡಿಸಿಎಂ ಅವರ ಅಧಿಕಾರ ಕುರಿತಂತೆ ಯಾವುದೇ ಹೇಳಿಕ ತಾವು ನೀಡುವುದಿಲ್ಲ ಎಂದರು.
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ. 1 ಇದೆ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗರಡ್ಡಿ, ಅವರು ಹೇಳಿದ್ದು ಹಿಂದಿನ ಬಿಜೆಪಿ ಸರ್ಕಾರದ
ಅವಧಿಯಲ್ಲಿ ನಡೆದ ಬಗ್ಗೆ, ವಿನಾಃ ಕಾಂಗ್ರೆಸ್ ಸರ್ಕಾರದಲ್ಲ ಎಂದರು. ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಜೊತೆಗಿದ್ದರು.

WhatsApp Group Join Now
Telegram Group Join Now
Share This Article
error: Content is protected !!