ಸೇಡಂ: ನಾಳೆ ದಿನಾಂಕ 12 ಆಗಸ್ಟ್ 2025 ಮಂಗಳವಾರ ಬೆಳಿಗ್ಗೆ 9:30ಕ್ಕೆ, ಶ್ರೀ ಸಿಮೆಂಟ್ ಕೊಡ್ಲಾ ಮೇನ್ ಗೇಟ್ ಎದುರುಗಡೆ ಕೊಡ್ಲಾ ಹಾಗೂ ಬೆನಕನಹಳ್ಳಿ ರೈತರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ ಹಮ್ಮಿಕೊಂಡಿದ್ದು, ರೈತರ ಮಾಡುತ್ತಿರುವ ಈ ಹೋರಾಟಕ್ಕೆ ಭಾರತೀಯ ಜನತಾ ಪಾರ್ಟಿ ಸಂಪೂರ್ಣ ಬೆಂಬಲ ನೀಡುತ್ತಿದ್ದು ಆದ್ದರಿಂದ ಪಕ್ಷದ ಮುಖಂಡರು ಮಂಡಲ ಪದಾಧಿಕಾರಿಗಳು ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಯುವಕರು, ಕಾರ್ಯಕರ್ತರು, ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕಾಗಿ ಎಂದು ಶಿವಶರಣಪ್ಪ ಶಂಕರ್ ಮೆಡಿಕಲ್ ನಿಡಗುಂದ ಅಧ್ಯಕ್ಷರು ಬಿಜೆಪಿ ಸೇಡಂ ಮಂಡಲ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




