Ad imageAd image

ಚಾಕುದಿಂದ ಚುಚ್ಚಿ ವ್ಯಕ್ತಿಯ ಬರ್ಬರ ಕೊಲೆ

Bharath Vaibhav
WhatsApp Group Join Now
Telegram Group Join Now

ಚಿಟಗುಪ್ಪಾ:-  ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ಜರುಗಿದ್ದು ಗ್ರಾಮವೊಂದರ ಜನರು ಬೆಚ್ಚಿ ಬೀಳುವಂತಾಗಿದೆ.ಹೌದು ಈ ಘಟನೆ ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 65ರ ಪಕ್ಕದ ಧಾಬಾ ಒಂದರ ಸಮೀಪ ವ್ಯಕ್ತಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕೊಲೆ ಶುಕ್ರವಾರ ಮಧ್ಯರಾತ್ರಿ ನಡೆದಿದ್ದು ಶನಿವಾರ ಬೆಳಗ್ಗೆ ಮೃತ ದೇಹ ಬೆಳಕಿಗೆ ಬಂದಿದೆ.ಕೊಲೆಯಾದ ವ್ಯಕ್ತಿಯನ್ನ ತೆಲಂಗಾಣ ರಾಜ್ಯದ ಹೈದ್ರಾಬಾದ್ ಮೂಲದ ಮಲ್ಲಿಕಾರ್ಜುನ ತಂದೆ ಗೋಪಾಲರಾವ ವಯಸ್ಸು 40 ಎಂದು ಹೇಳಲಾಗುತ್ತಿದೆ.
ಕೊಲೆಗೆ ಮೂಲ ಕಾರಣ ಮತ್ತು ಕೊಲೆ ಮಾಡಿದವರ ಬಗ್ಗೆ ಸುಳಿವು ಸಿಕ್ಕಿಲ್ಲ,ಆದರೆ ಕೊಲೆಯಾದ ಸ್ಥಳದಲ್ಲಿ ಕಲ್ಲು ಕಾಣಿಸಿಕೊಂಡಿವೆ.ಕೊಲೆಯಾದ ಘಟನಾ ಸ್ಥಳಕ್ಕೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ವರದಿ:- ಸಜೀಶ ಲಂಬುನೋರ್ 

WhatsApp Group Join Now
Telegram Group Join Now
Share This Article
error: Content is protected !!