Ad imageAd image

‘ಶಾಂತಿ ಸೌಹಾರ್ದತೆಯಿಂದ ಗಣೇಶ ಚತುರ್ಥಿ, ಈದ್ ಮಿಲಾದ ಆಚರಿಸಿ’

Bharath Vaibhav
‘ಶಾಂತಿ ಸೌಹಾರ್ದತೆಯಿಂದ ಗಣೇಶ ಚತುರ್ಥಿ, ಈದ್ ಮಿಲಾದ ಆಚರಿಸಿ’
WhatsApp Group Join Now
Telegram Group Join Now

 ———————————ಡಿವೈ ಎಸ್‌ಪಿ ಕುಲಕರ್ಣಿ ನಾಗರಿಕರಲ್ಲಿ ಮನವಿ      

ಇಳಕಲ್ : ಆಗಸ್ಟ್ 27ರಂದು ಗಣೇಶ ಚತುರ್ಥಿ ಹಾಗೂ ಸಪ್ಟೆಂಬರ್ 5 ರಂದು ಈದ್ ಮಿಲಾದ ಹಬ್ಬಆಚರಣೆ ಅಂಗವಾಗಿ ಇಂದು ಸಂಜೆ ಶಾಂತಿ ಸಭೆ ನಡೆಯಿತು ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಡಿ ವೈ ಎಸ್ ಪಿ ವಿಶ್ವನಾಥ ಕುಲಕರ್ಣಿ ಮಾತನಾಡಿ ಸರ್ಕಾರ ಹೊರಡಿಸಿದ ಸುತ್ತೋಲೆ ಪ್ರಕಾರ ಶಾಂತ ರೀತಿಯಿಂದ ಸೌಹಾರ್ದತೆಯಿಂದ ಹಬ್ಬ ಆಚರಿಸಿ ಮತ್ತು ಜಾನಪದ ಡೊಳ್ಳು ಕುಣಿತ ವೀರಗಾಸೆ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜನ ಮೆಚ್ಚುಗೆಯ ಗಣೇಶ ಚತುರ್ಥಿಯ ಹಬ್ಬವನ್ನು ಆಚರಿಸಿ ಎಂದು ಕರೆ ನೀಡಿದರು.
ಡಿಜೆಯನ್ನು ಸಂಪೂರ್ಣ ನಿಷೇಧಿಸಿದೆ ಡಿ ಜೆ ಹಣವನ್ನು ವಿದ್ಯಾರ್ಥಿನಿಲಯಗಳಿಗೆ ಅನಾಥಾಲಯಗಳಿಗೆ ನೀಡಿ ಅದರಿಂದ ಆಶಿರ್ವಾದ ಪಡೆಯುವಂತೆ ಮನವಿ ಮಾಡಿದರು. ಸರಕಾರದ ನಿಯಮಾವಳಿಗಳನ್ನು ಪಾಲಿಸುವಂತೆ ಕರೆ ನೀಡಿದರು.
ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಜಾಧವ ಮಾತನಾಡಿ ನಗರದ ವಿವಿಧ ಪ್ರದೇಶಗಳಲ್ಲಿ ಗಜಾನನ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ವಿಸರ್ಜಿಸಲು ವಿವಿಧ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್ ಗಳನ್ನು ಇರಿಸಲಾಗಿದೆ ಅವುಗಳನ್ನು ಸದುಪಯೋಗ ಮಾಡಿಕೊಳ್ಳಲು ಹೇಳಿದರು ಮತ್ತು ಪಟಾಕ್ಷಿ ಅಂಗಡಿಗಳನ್ನು ಹೊರಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಉಪ ತಹಸಿಲ್ದಾರ್ ಈಶ್ವರಗಡ್ಡಿ ಯಲ್ಲಪ್ಪ ಪೂಜಾರಿ ಆರಿಫ್ ಫಣಿಬಂಧ ಸೇರಿದಂತೆ ಇತರರು ಮಾತನಾಡಿದರು
ವೇದಿಕೆಯಲ್ಲಿ ನಗರ ಠಾಣೆ ಪಿಎಸ್ಐ ಮಂಜುನಾಥ ಪಾಟೀಲ ಗ್ರಾಮೀಣ ಪಿಎಸ್ಐ ಮಲ್ಲಿಕಾರ್ಜುನ ಸತ್ತಿಗೌಡ ಗ್ರಾಮೀಣ ಕ್ರೈಂ ಪಿಎಸ್ಐ ಎಸ್ ಆರ್ ನಾಯಕ ಅಬಕಾರಿ ಇಲಾಖೆ ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ದುರಗೇಶ ಸ್ವಾಗತಿಸಿದರು ಸಿದ್ದು ಹೊಸಮನಿ ವಂದಿಸಿದರು.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!