ಸಿಂಧನೂರು :ಜುಲೈ 20ರಂದು ನಗರದ ಪ್ರವಾಸಿ ಮಂದಿರದಲ್ಲಿ ಭಾರತ ವೈಭವ ಕನ್ನಡ ದಿನಪತ್ರಿಕೆ ಹಾಗೂ ಬಿವಿ ನ್ಯೂಸ್ 5 ಚಾನಲ್ ಸಂಪಾದಕರಾದ ಡಾ. ಎನ್. ಪ್ರಶಾಂತ್ ರಾವ್ ಸರ್ ಅವರ ಜನ್ಮದಿನಾಚರಣೆಯನ್ನು ಭಾರತ ವೈಭವ ವರದಿಗಾರ ಬಸವರಾಜ ಬುಕ್ಕನಹಟ್ಟಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಜರಗಿತು ಎಂದು ಸಮಾಜ ಸೇವಕ ಗುರುರಾಜ ಮುಕ್ಕುಂದ ತಿಳಿಸಿದರು.

ನಂತರ ಅವರು ಮಾತನಾಡಿ ಭಾರತ ವೈಭವ ಪತ್ರಕರ್ತ ಬಸವರಾಜ ಬುಕ್ಕನಟ್ಟಿ ಅವರ ಆಶಯದಂತೆ ಈ ದಿನ ಪ್ರಶಾಂತ್ ರಾವ್ ಸರ್ ರವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದು ಸರ್ ಅವರು ಸದಾ ಕಾಯಕವೇ ಕೈಲಾಸ ಅಂತ ನಂಬಿಕೊಂಡು ತನ್ನ ಜೀವನದಲ್ಲಿ ತಾನು ತನ್ನ ಸ್ವಂತ ಕಾಲು ಮೇಲೆ ನಿಂತು ಇನ್ನು ಈ ಪತ್ರಿಕೆ ರಂಗದಲ್ಲಿ ಇನ್ನು ಸಾವಿರ ಜನಕ್ಕೆ ಕೆಲಸ ಕೊಡಬೇಕು ಅನ್ನೋ ಅವರ ಗುರಿ ಈಡೇರಲಿ ಭವಿಷ್ಯದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಅನ್ನೋದು ನಮ್ಮೆಲ್ಲರ ಹಾರೈಕೆ ಈ ಜನ್ಮ ದಿನದ ಶುಭಾಶಯಗಳು ಎಂದೆಂದೂ ಸದಾ ಹೀಗೆ ಖುಷಿಯಾಗಿರಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ತಾಯಿ ಅಂಬಾದೇವಿಯ ಆಶೀರ್ವಾದ ಸದಾ ನಿಮಗಿರಲಿ ನಿಮ್ಮ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ನಾವೆಲ್ಲರೂ ಹಾರೈಸುತ್ತೇವೆ ಎಂದರು.

ಈ ಸಂದರ್ಭದಲ್ಲಿ: ಗುರುರಾಜ ಮುಕ್ಕುಂದ, ಗಂಗಣ್ಣ ಡಿಸ್, ಲಕ್ಷ್ಮಣ ಭೂವಿ, ದುರುಗೇಶ್ ಬಾಲಿ, ವಿಜಯಕುಮಾರ್, ಬಸವರಾಜ ಗಸ್ತಿ, ರಾಮಕೃಷ್ಣ ಭಜಂತ್ರಿ, ಶಿವಮ್ಮ,,ಯಮನಮ್ಮ, ಇನ್ನು ಮುಂತಾದವರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




