Ad imageAd image

ಸಂಚಾರಿ ಕುರಿಗಾಹಿಗಳಿಗೆ ಸಿಎಂ ಗುಡ್ ನ್ಯೂಸ್ : ರಾಜ್ಯಾದ್ಯಂತ ಶಸ್ತ್ರಾಸ್ತ್ರ ಪರವಾನಿಗೆ ನೀಡಲು ಸೂಚನೆ 

Bharath Vaibhav
ಸಂಚಾರಿ ಕುರಿಗಾಹಿಗಳಿಗೆ ಸಿಎಂ ಗುಡ್ ನ್ಯೂಸ್ : ರಾಜ್ಯಾದ್ಯಂತ ಶಸ್ತ್ರಾಸ್ತ್ರ ಪರವಾನಿಗೆ ನೀಡಲು ಸೂಚನೆ 
WhatsApp Group Join Now
Telegram Group Join Now

ಬೆಂಗಳೂರು: ಸಂಚಾರಿ ಕುರಿಗಾಹಿಗಳಿಗೆ ರಾಜ್ಯಾದ್ಯಂತ ಶಸ್ತ್ರಾಸ್ತ್ರ ಪರವಾನಿಗೆ ನೀಡಲು ಅಗತ್ಯ ಕ್ರಮ ವಹಿಸುವಂತೆ ಸರ್ಕಾರ ಆದೇಶಿಸಿದೆ.

ಸಂಚಾರಿ ಕುರಿಗಾರರು ತಮ್ಮನ್ನು, ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ರಾಜ್ಯಾದ್ಯಂತ ತಮ್ಮೊಂದಿಗೆ ಬಂದೂಕು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಲೈಸೆನ್ಸ್ ನೀಡುವ ಸಂಬಂಧ ಅಗತ್ಯ ಕ್ರಮ ವಹಿಸಲು ಒಳಾಡಳಿತ ಇಲಾಖೆ ಡಿಜಿ- ಐಜಿಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಸಂಚಾರ ಕುರಿಗಾರರಿಗೆ ಅನುಕೂಲವಾಗುವಂತೆ ಅನೇಕ ಸೌಲಭ್ಯ ಕಲ್ಪಿಸಿರುವ ಸರ್ಕಾರ ಇದೀಗ ಶಸ್ತ್ರಾಸ್ತ್ರ ಪರವಾನಿಗೆ ಹೊಂದಲು ಅವಕಾಶ ನೀಡಿದೆ.

ಸಂಚಾರ ಕುರಿಗಾರರ ಮೇಲೆ ದಾಳಿ, ಕುರಿಗಳ ಕಳವು ಪ್ರಕರಣ ಹಿನ್ನಲೆಯಲ್ಲಿ ಕುರಿಗಾಹಿಗಳ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!