ಬೆಂಗಳೂರು : ಕಿರುತೆರೆ ಹಾಸ್ಯನಟ ರಾಕೇಶ್ ಪೂಜಾರಿ ಅನಾರೋಗ್ಯದಿಂದ ಹಠಾತ್ತನೆ ಸಾವನ್ನಪ್ಪಿದ್ದಾರೆ. ಕಡಿಮೆ ರಕ್ತದೊತ್ತಡದಿಂದ ಈ ಸಾವು ಸಂಭವಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೂಲತಃ ರಂಗಕಲಾವಿದರಾಗಿದ್ದ ರಾಕೇಶ್ ಪೂಜಾರಿ, ಕಾಮಿಡಿ ಕಿಲಾಡಿಗಳು ಕಿರುತೆರೆ ಕಾರ್ಯಕ್ರಮದಿಂದ ತುಳು ನಾಟಕದ ಮೂಲಕ ಕಲಾವಿದರಾಗಿ ಪಾದಾರ್ಪಣೆ ಮಾಡಿದ್ದ ರಾಕೇಶ್ ತಮ್ಮ ಆಂಗಿಕ ಅಭಿನಯ, ಸರಳ ವ್ಯಕ್ತಿತ್ವದಿಂದ ಜನರ ಮನಗೆದ್ದಿದ್ದರು.
ನಟಿ ರಕ್ಷಿತಾ ಪ್ರೇಮ್ ಸೇರಿದಂತೆ ಹಲವು ಮಂದಿ ನಟನಟಿಯರು ರಾಕೇಶ್ ಪೂಜಾರಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.




